ಬುದ್ಧ ವಿಹಾರದ ಬಳಿಯಲ್ಲಿನ ಅಕ್ರಮ ಭೂ ಮಾರಾಟ ತಡೆಯಿರಿ: ಮಲ್ಲಿಕಾರ್ಜುನ ಕ್ರಾಂತಿ

0
89

ಸುರಪುರ: ನಗರದ ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರದ ಬಳಿಯಲ್ಲಿನ ರಸ್ತೆಯ ಪಕ್ಕದಲ್ಲಿರುವ ಗೌಂಠಾಣ ಜಾಗವನ್ನು ಕೆಲವರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ,ಇದಕ್ಕೆ ನಗರಸಭೆಯ ಅಧಿಕಾರಿಗಳು ನಿವೇಶನಕ್ಕೆ ನಂಬರ್ ನೀಡಿದ್ದು ಇದರಿಂದ ದಲಿತರು ಮತ್ತು ಭೂ ಮಾಫಿಯಾದವರ ಮದ್ಯೆ ಗಲಾಟೆಗಳಾಗುವ ಸಂಭವವಿದೆ.ಇದಕ್ಕೆ ನಗರಸಭೆಯ ಅಧಿಕಾರಿಗಳೆ ಹೊಣೆಯಾಗಲಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆರೋಪಿಸಿದರು.

ನಗರಸಭೆ ಕಚೇರಿ ಮುಂಭಾಗದಲ್ಲಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಸರ್ವೆನಂ:೨೩/೭ ಮತ್ತು ಬೆಂಗಳೂರು- ಕಲಬುರ್ಗಿರಸ್ತೆಯ ಹತ್ತಿರ ವಿರುವ ಗೌಠಾಣಾ ಸ್ಥಳವನ್ನು ನಗರದ ಕೆಲವು ವ್ಯಕ್ತಿಗಳು ಸೇರಿಕೊಂಡು ೫೦ ಮತ್ತು ೧೦೦ ರೂ ಛಾಪಾ ಕಾಗದದ ಮೇಲೆ ಬರೆದುಕೊಟ್ಟು ಸರಿಯಾದ ನಿವೇಶನವನ್ನು ಗುರುತಿಸದೆ ನೀಡಿದ್ದಾರೆ ಅಷ್ಟಕ್ಕು ಅಲ್ಲಿ ಯಾವುದೆ ತರೆನಾದ ಖಾಸಗಿ ನಿವೇಶನಗಳು ಆ ಸ್ಥಲದಲ್ಲಿ ಇರುವುದಿಲ್ಲಾ ಈ ಎಲ್ಲಾ ವಿಷಯಗಳು ಪೌರಾಯುಕ್ತರ ಗಮನಕ್ಕಿದ್ದರು ಯಾವುದೆ ಕ್ರಮ ಜರುಗಿಸದೆ ಇರುವುದು ದುರದೃಷ್ಟಕರವಾಗಿದೆ. ಎಂದು ಬೇಸರ ವ್ಯಕ್ತಪಡಿಸಿದರಿ ಆ ಸ್ಥಳಗಳಿಗೆ ಈಗಾಗಲೆ ನಗರಸಭೆವೆ ನಿವೇಶನ ಸಂಖ್ಯೆಯನ್ನು ನೀಡಿರುವುದನ್ನು ನೋಡಿದರೆ ಈ ಮೋಸದ ವ್ಯವಹಾರದಲ್ಲಿ ಅಧಿಕಾರಿಗಳಪಾಲು ಇರುವುದು ಗೊತ್ತಾಗುತ್ತದೆ ಎಂದು ಆರೋಪಿಸಿದರು.

Contact Your\'s Advertisement; 9902492681

ತಕ್ಷಣವೆ ಪೌರಾಯುಕ್ತರು ಸದರಿ ಸ್ಥಳಕ್ಕೆ ಸಂಬಂಧಿಸಿ ನೀಡಿದ ನಿವೇಶನಗಳ ಸಂಖ್ಯೆಯನ್ನು ರದ್ದುಗೊಳಿಸಿ ತಪ್ಪಿತಸ್ಥ ಅಧಿಕಾರಿಗಳ ಮತ್ತು ವ್ಯಕ್ತಿಗಳಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ತಮ್ಮ ಮೇಲೆಯೆ ಅಟ್ರಾಸಿಟಿ ಮತ್ತು ೪೨೦ ಕೇಸು ದಾಖಲಿಸಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿ ನಂತರ ಮನವಿಯನ್ನು ಪೌರಾಯುಕ್ತ ಜೀವನ ಕುಮಾರ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ, ಬೀಮರಾಯ ಸಿಂಧಗಿರಿ, ನಿಂಗಣ್ಣ ಮುಷ್ಠಳ್ಳಿ, ರಾಮಣ್ಣ ಶಳ್ಳಗಿ,ತಿಪ್ಪಣ್ಣ ಶೆಳ್ಳಿಗಿ,ಜೆಟ್ಟೆಪ್ಪ ನಾಗರಾಳ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here