ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ರಾಜಾ ಮದನಗೋಪಾಲ ನಾಯಕರಿಗೆ ನುಡಿ ನಮನ

0
51

ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿನ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ಕಳೆದ ಜುಲೈ 27 ರಂದು ನಿಧನರಾದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರಿಗೆ ಮೇಣದ ಬತ್ತಿ ಹಿಡಿದು ಶ್ರದ್ಧಾಂಜಲಿ ಹಾಗು ನುಡಿ ನಮನ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕ ಭೀಮರಾಯ ಮಲ್ಲಾಪುರ ಮಾತನಾಡಿ,ರಾಜಾ ಮದನಗೋಪಾಲ ನಾಯಕರ ಸಾವು ಒಪ್ಪಲಾಗುತ್ತಿಲ್ಲ,ಆದರೂ ಅನಿವಾರ್ಯ.ಅವರೊಬ್ಬ ಧೀಮಂತ ನಾಯಕ,ಕೇವಲ ರಾಜಕಾರಣಿಯಾಗಿರದೆ ಎಲ್ಲಾ ರಂಗಗಳಿಗೂ ಕೊಡುಗೆ ನೀಡಿದ್ದಾರೆ.

Contact Your\'s Advertisement; 9902492681

ಸಾಮಾಜಿಕ,ಶೈಕ್ಷಣಿಕ,ಕೃಷಿ,ಸಾಹಿತ್ಯ,ಕಲೆ ಮತ್ತು ಕ್ರೀಡೆ ಹೀಗೆ ಎಲ್ಲಾ ರಂಗಗಳ ಏಳಿಗೆಗ ತಮ್ಮದೆ ಆದ ಕೊಡುಗೆ ನೀಡಿದ್ದಾರೆ.ಅವರನ್ನು ಕಳೆದುಕೊಂಡು ಇಂದು ಸುರಪುರ ಬಡವಾಗಿದೆ.ಇಂದು ಅವರು ಅನೇಕ ಸಂದೇಶಗಳನ್ನು ನೀಡಿ ಹೋಗಿದ್ದಾರೆ.ಅವುಗಳನ್ನೆಲ್ಲ ನಮ್ಮೊಳಗೆ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ಅವರು ನಡೆದು ಬಂದ ದಾರಿಯನ್ನು ನೆನೆದರು.

ನಂತರ ಸಂಸ್ಥೆಯ ಅಧ್ಯಕ್ಷ ಮೊನಪ್ಪ ಕಳಸರ್ ಮಾತನಾಡಿ,ರಾಜಾ ಮದನಗೋಪಾಲ ನಾಯಕರು ನೇರ ನಿಷ್ಠುರರಾಗಿದ್ದರು ಅವರೊಳಗೊಬ್ಬ ತಾಯಿಯ ಕಾಳಜಿ ಇರುತ್ತಿತ್ತು.ನಮ್ಮ ಒಕ್ಕೂಟದ ಅಧ್ಯಕ್ಷರಾಗಿ ನಮಗೆ ಅನೇಕ ಸಲಹೆ ಸೂಚನೆಗಳನ್ನು ನೀಡುತ್ತಾ ಮುನ್ನಡೆಸುತ್ತಿದ್ದರು.ರಾe ಮನೆತನ ಮತ್ತು ಮಾಜಿ ಸಚಿವರಾದರು ಎಲ್ಲರೊಂದಿಗೆ ಬೆರೆಯುತ್ತಿದ್ದ ಸರಳ ಜೀವಿಯಾಗಿದ್ದರು.ಅವರನ್ನು ಕಳೆದುಕೊಂಡ ನಾವು ನಿಜಕ್ಕೂ ನತದೃಷ್ಟರು ಎಂದು ಭಾವನಾತ್ಮಕವಾಗಿ ನುಡಿದರು.

ಕಾರ್ಯಕ್ರಮದ ಆರಂಭದಲ್ಲಿ ರಾಜಾ ಮದನಗೋಪಾಲ ನಾಯಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಕಾರ್ಯಕ್ರಮದಲ್ಲಿ ದೇವರಗೋನಾಲ ಗೆಳೆಯರ ಬಳಗ,ಸಂಸ್ಥೆಯ ಹಳೆ ವಿದ್ಯಾರ್ಥಿಗಳಿದ್ದರು.

ಶಾಂತಪ್ಪ ಕಳಸರ್ ಸ್ವಾಗತಿಸಿ ವಂದಿಸಿದರು.ಹಣಮಂತ ಸಿದ್ದಾಪುರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here