ಶಿಘ್ರವಾಗಿ ರಸಗೊಬ್ಬರ ಪೊರೈಸುವಂತೆ ಕೃಷಿ ಸಚಿವರಿಗೆ ಶಾಸಕ ನರಸಿಂಹ ನಾಯಕ ಮನವಿ

0
269

ಸುರಪುರ: ಬಹಳ ವರ್ಷಗಳಿಂದ ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಿದ್ದ ರೈತನ ಮುಖದಲ್ಲಿ ಈ ಬಾರಿಯ ಮುಂಗಾರು ಉತ್ತಮವಾಗಿದ್ದರಿಂದ ಮಂದಹಾಸ ಮೂಡಿದೆ ಇತಂಹ ಸಂಧಂರ್ಭದಲ್ಲಿ ಅವರಿಗೆ ಬೇಕಾದ ರಸಗೊಬ್ಬರಗಳನ್ನು ಪೊರಸಬೇಕು ರಸ್ಗೊಬ್ಬರಕ್ಕಾಗಿ ದಿನಂಪ್ರತಿಯಾಗಿ ರೈತರುಗಳು ಗೊಬ್ಬರದ ಮಾರಾಟ ಮಳಿಗೆಯ ಮುಂದೆ ನಿರಾಸೆಯಿಂದ ಬರುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ರೈತರು ಮತ್ತೆ ಸಂಕಷ್ಟಕೆ ಸಿಲುಕುವ ಸಂಭವವಿದೆ ಆದ್ದರಿಂದ ಶೀಘ್ರವೆ ಯಾದಗಿರಿ ಜಿಲ್ಲೆಗೆ ರಸಗೊಬ್ಬರ ಪೂರೈಕರ ಮಾಡುವಂತೆ ಶಾಸಕ ರಾಜುಗೌಡ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಾಸಕರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರಿಗೆ ಪತ್ರಬರೆದಿದ್ದು ಶೀಘ್ರದಲ್ಲಿ ಯಾದಗಿರ ಜಿಲ್ಲೆಗೆ ಡಿ.ಎ.ಪಿ ೬ ನೂರು ಮೆಟ್ರಿಕ್ ಟನ್, ಡಿಎಪಿ ಕಾಂಪ್ಲೆಕ್ಸ ೯ ಸಾವಿರ ಮೆಟ್ರಿಕ್ ಟನ್, ಯುರಿಯಾ ೧೧ನೂರು ಮೆಟ್ರಿಕ್ ಟನ್, ಮತ್ತು ಎಮ್‌ಒಪಿ ೪ ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಪೊರೈಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here