ಮಾಜಿ ಸಚಿವ ಜಿ.ರಾಮಕೃಷ್ಣ ನಿಧನಕ್ಕೆ ಸಂತಾಪ

0
83

ಶಹಾಬಾದ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ರಾಜ್ಯದ ಮಾಜಿ ಸಚಿವ ಜಿ.ರಾಮಕೃಷ್ಣ(84) ಅವರು ರವಿವಾರ ನಿಧನರಾದರು.ಅವರ ನಿಧನಕ್ಕೆ ಕಾಂಗ್ರೆಸ್ ಪಕ್ಷದ ನಗರದ ಘಟಕದ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಹಾಗೂ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ್ ಹಿರೇಮಠ ಸಂತಾಪ ಸೂಚಿಸಿದ್ದಾರೆ.

ಜಿ.ರಾಮಕೃಷ್ಣ ಅವರು ಸರಳತೆ, ಸಜ್ಜನಿಕೆಯ ಪ್ರಬುದ್ಧ ರಾಜಕಾರಣಿಯಾಗಿದ್ದರು. ವೀರಪ್ಪ ಮೋಯ್ಲಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಹೊಣೆಗಾರಿಕೆ ನಿಭಾಯಿಸಿದ್ದರು. ಅಲ್ಲದೇ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾಗಿಯೂ ಜನಪರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು.

Contact Your\'s Advertisement; 9902492681

ಬಹಳ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರ ಅಗಲಿಕೆ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಪ್ರಾರ್ಥಿಸುತ್ತೆ ಎಂದು ಹೇಳಿದರು.

ಸಂತಾಪ: ಮಾಜಿ ಸಚಿವ ಜಿ.ರಾಮಕೃಷ್ಣ ಅವರ ನಿಧನಕ್ಕೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ವಿಜಯಕುಮಾರ ಮುಟ್ಟತ್ತಿ, ಮುಖಂಡರಾದ ಶರಣಗೌಡ ಪಾಟೀಲ, ಎಪಿಎಮ್ಸಿ ಸದಸ್ಯ ವಿಶ್ವಾರಾಧ್ಯ ಬೀರಾಳ,ಗಿರೀಶ ಕಂಬಾನೂರ, ಸಾಹೇಬಗೌಡ ಬೋಗುಂಡಿ,ಭೀಮುಗೌಡ ಖೇಣಿ, ರಾಜೇಶ ಯನಗುಂಟಿಕರ್, ಸಾಬೇರಾ ಬೇಗಂ, ಡಾ.ಅಹ್ಮದ್ ಪಟೇಲ್,ಜಾವೀದ್, ಸುಭಾಷ ಪವಾರ,ಕುಮಾರ ಚವ್ಹಾಣ, ನಾಗಣ್ಣ ರಾಂಪೂರೆ, ಸಯ್ಯದ್ ಜಹೀರ್, ಡಾ.ಜಹೀರ್,ಅನ್ವರ್ ಪಾಶಾ,ಶಕೀಲ ಇಂಗಳಗಿ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here