14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಗಲ್ಲುಶಿಕ್ಷೆಗೆ ಆಗ್ರಹ 

0
81

ಜೇವರ್ಗಿ : ಧಾರವಾಡ ಜಿಲ್ಲೆಯ ಬೆಗುರು ಗ್ರಾಮದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವನ್ನು ಎಸಗಿದ ಪಾತಕಿ ಬಸಿರನ್ನು ಎನ್ನುವ ವ್ಯಕ್ತಿಯನ್ನು ಈ ಕೂಡಲೇ ಗಲ್ಲುಶಿಕ್ಷೆಗೆ ಒಳಪಡಿಸಬೇಕೆಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

ಇದೊಂದು ಹೇಯ ಕೃತ್ಯವಾಗಿದ್ದು ಇಡೀ ಮಾನವ ಜನಾಂಗವೇ ತಲೆತಗ್ಗಿಸುವ ನಾಚಿಕೆಗೇಡಿ ಸಂಗತಿಯಾಗಿದೆ. ಇಂತಹ ಪ್ರಕರಣಗಳಲ್ಲಿ ಅತ್ಯಾಚಾರ ನಡೆದಿದೆ ಎಂದು ತಿಳಿದು ಬಂದ ತಕ್ಷಣವೇ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಸರಕಾರ ಮುಂದಾಗಬೇಕು. ಹಾಗೂ ಕೂಡಲೇ ಗಲ್ಲುಶಿಕ್ಷೆಗೆ ಗುರಿ ಮಾಡಬೇಕು, ವಿಳಂಬತೆ ಮತ್ತು ಪ್ರಕರಣದಲ್ಲಿ ಸಾಕ್ಷಾಧಾರಗಳ ಕೊರತೆಯಿಂದಾಗಿ ಅಪರಾಧಿಗಳಿಗೆ ಖುಲಾಸೆ ಯಾಗುವ ಅವಕಾಶಗಳಿದ್ದು, ನ್ಯಾಯಾಂಗದ ವಿಳಂಬದಿಂದಾಗಿ ಅತ್ಯಾಚಾರಿಗಳಿಗೆ ಪುಷ್ಟಿಕರಣ ನೀಡಿದಂತಾಗುತ್ತದೆ. ಕೂಡಲೇ ಕ್ರಮ ಕೈಗೊಂಡರೆ ಮತ್ತೊಮ್ಮೆ ಇಂಥ ಪ್ರಕರಣ ಜರುಗದಂತೆ ಎಚ್ಚರಿಕೆಯ ಗಂಟೆ ಬಾರಿಸಿದಂತೆ ಆಗುತ್ತದೆ. ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಕುರಿತು ಜೇವರ್ಗಿ ತಹಸಿಲ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ಸಂಘಟನೆಯ ತಾಲೂಕ ಅಧ್ಯಕ್ಷರಾದ ಈಶ್ವರ್ ಹಿಪ್ಪರಗಿ, ಬೇಡ ಜಂಗಮ ಸಮಾಜದ ಮುಖಂಡರಾದ ಪ್ರವೀಣ್ ಕುಮಾರ್ ಕುಂಟೋಜಿ ಮಠ, ಡಾ. ಪಿ.ಎಂ ಮಠ ಸೇರಿದಂತೆ ಆನಂದ ದೇಸಾಯಿ, ಆನಂದ್ ಕುಸ್ತಿ, ಮಲ್ಲಣ್ಣಗೌಡ ಮಾಲಿಪಾಟೀಲ ಸಂತೋಷ್ ಬಿರಾಳ ,ಈರಣ್ಣ ಪಾಟೀಲ್, ವಿಶ್ವ ಹಿಂದೂ ಪರಿಷತ್ತಿನ, ಬಜರಂಗದಳ ಹಾಗೂ ವೀರಶೈವ ಮಹಾಸಭಾ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here