ನರಸಾಪುರದಲ್ಲಿ ಪ್ರಚಂಡ ಪುಟಾಣಿಗಳು ಚಲನಚಿತ್ರದ ಚಿತ್ರೀಕರಣ

0
100

ಕೋಲಾರ: ಇಂದು ನರಸಾಪುರದಲ್ಲಿ ಪ್ರಚಂಡ ಪುಟಾಣಿಗಳು ಸಿನಿಮಾದ ಚಿತ್ರೀಕರಣ ನಡೆಯಿತು.

ಇದು ಒಂದು ಮಕ್ಕಳ ಚಿತ್ರವಾಗಿದೆ. ಮುಖ್ಯವಾಗಿ ಈ ಚಿತ್ರದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಾಜೀವ್ ಕೃಷ್ಣ, ನಿರ್ಮಾಪಕರು ಪದ್ಮಾವತಿ, ಮುಖ್ಯವಾಗಿ ಅವಿನಾಶ್ ಮತ್ತು ಶೋಭರಾಜ್ ನಟಿಸುತ್ತಿದ್ದಾರೆ.

Contact Your\'s Advertisement; 9902492681

ನಟ ಸುಪ್ರೀಂ ಹೀರೋ ಶಶಿಕುಮಾರ್ ಮಾತನಾಡಿ, ನಾನು ಹಲವು ಬಾರಿ ಕೋಲಾರಕ್ಕೆ ಬಂದಿದ್ದೇನೆ, ಇಲ್ಲಿನ ಜನ ಚಿನ್ನದ ಮನಸ್ಸುಳ್ಳವರು ಅದಕ್ಕೆ ಹೇಳುವುದು ಚಿನ್ನದ ನಾಡು ಕೋಲಾರ ಎಂದು ತಿಳಿಸಿದ್ದಾರೆ.

ಈ ಪ್ರಚಂಡ ಪುಟಾಣಿಗಳು ಸಿನಿಮಾ ಮಕ್ಕಳ ಚಿತ್ರವಾಗಿದ್ದು, ಎಲ್ಲರೂ ತಮ್ಮ ಕುಟುಂಬದೊಂದಿಗೆ ನೋಡಬಹುದಾದ ಚಿತ್ರವಾಗಿದೆ ಎಂದರು.

ಈ ಒಂದು ಚಿತ್ರವು ನಿಧಿಯ ಶೋಧನೆಯ ಬಗೆಗಿನ ಕಥಾಹಂದರವನ್ನು ಹೊಂದಿದ್ದು, ಮುಖ್ಯವಾಗಿ ನಿಧಿ ಚೋರರಿಂದ ನಿಧಿಯನ್ನು ಕಾಪಾಡುವ ಕಥೆಯನ್ನು ಇದು ಹೊಂದಿದೆ ಎಂದು ಹೇಳಿದರು. ನಿಧಿಯ ರಕ್ಷಣೆಗಾಗಿ ಮಕ್ಕಳು ತೋರುವ ಸಾಹಸ ಗಾಥೆಯನ್ನು ಈ ಚಿತ್ರ ಹೊಂದಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಚಂಡ ಪುಟಾಣಿಗಳು ಚಿತ್ರದ ನಿರ್ದೇಶಕರಾದ ರಾಜೀವ್ ಕೃಷ್ಣ, ರಘು , ಖಳನಾಯಕ ಬಲರಾಮ್ ಹಾಗೂ ಅನೇಕ ಸಹ ಕಲಾವಿದರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here