ಬೀದಿನಾಯಿಗಳ ದಾಳಿ: ದಿನಪತ್ರಿಕೆ ವಿತರಕ ಗಾಯ

0
62

ಕಲಬುರಗಿ: ಬೀದಿ ನಾಯಿಗಳು ಗುಂಪಾಗಿ ದಾಳಿ ನಡೆಸಿದ ಪರಿಣಾಮ ಯುವಕನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ವಾಡಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಸಂಭವಿಸಿದೆ.

ಬೆಳ್ಳಂಬೆಳಗ್ಗೆ ಓದುಗರ ಮನೆಗಳಿಗೆ ದಿನಪತ್ರಿಕೆ ವಿತರಿಸಲು ಹೊರಟಿದ್ದ ಯುವಕ ಮನೋಜಕುಮಾರ (೧೭) ಮೇಲೆ ಏಕಾಏಕಿ ದಾಳಿ ನಡೆಸಿರುವ ಬೀದಿ ನಾಯಿಗಳ ಹಿಂಡು, ಕಾಲಿಗೆ ಕಚ್ಚಿ ರಕ್ತಗಾಯಗೊಳಿಸಿವೆ. ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಳುಗೆ ಚಿಕಿತ್ಸೆ ಕೊಡಿಸಲಾಗಿದೆ.

Contact Your\'s Advertisement; 9902492681

ನಗರದ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗಿದೆ. ಪಾದಚಾರಿಗಳನ್ನು ದುರುಗುಟ್ಟಿ ನೋಡುತ್ತಾ ಬೀದಿಗಳಲ್ಲಿ ಕುಳಿತ ನಾಯಿಗಳ ಗುಂಪು ಕಂಡು ಸಾರ್ವಜನಿಕರು ಭಯಪಡುವಂತಾಗಿದೆ. ಮಾಂಸ ವ್ಯಾಪಾರಿಗಳು ಬೀದಿಗಳಲ್ಲಿ ಹರಡುತ್ತಿರುವ ಮಾಂಸ ತ್ಯಾಜ್ಯದ ರುಚಿ ಕಂಡಿರುವ ಕ್ರೂರಿ ನಾಯಿಗಳು ಜನರ ಮೇಲೆ ಎರಗುತ್ತಿವೆ.

ಇವಗಳನ್ನು ನಿಯಂತ್ರಿಸಬೇಕಾದ ಪುರಸಭೆ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ ಎಂದು ನಗರದ ನಿವಾಸಿಗಳು ದೂರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here