ಸರಕಾರದ ಕಾರ್ಯ ಶ್ಲಾಘನೀಯ: ಕರ್ನಾಟಕ ಪಶುವೈದ್ಯಕೀಯ ಸಂಘ

0
32

ಬೆಂಗಳೂರು: ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಶುವೈದ್ಯಕೀಯ ಇಲಾಖೆಯ ಪುನರ್‌ ರಚನೆಯ ಆದೇಶವನ್ನು ಜಾರಿಗೊಳಿಸಲು ಹಾಗೂ ಕೇವಲ 3 ದಿನಗಳಲ್ಲಿಯೇ ಮುಖ್ಯ ಪಶುವೈದ್ಯಾಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ ಸೇವಾ ಹಿರಿತನದ ಹಿನ್ನಲೆಯಲ್ಲಿ ಉಪನಿರ್ದೇಶಕರಾಗಿ ಮುಂಬಡ್ತಿ ನೀಡಲು ಡಿಪಿಸಿ ಮಾಡಿ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸುವ ನಿಟ್ಟಿನಲ್ಲಿ ಪಶುವೈದ್ಯಕೀಯ ಸಚಿವರು ಹಾಗೂ ರಾಜ್ಯ ಸರಕಾರ ಕೈಗೊಂಡ ದಿಟ್ಟ ನಿರ್ಧಾರಗಳ ಬಗ್ಗೆ ಕರ್ನಾಟಕ ಪಶುವೈದ್ಯಕೀಯ ಸಂಘ ಶ್ಲಾಘನೆ ವ್ಯಕ್ತಪಡಿಸಿದೆ.

ಕರ್ನಾಟಕ ಪಶುವೈದ್ಯಕೀಯ ಸಂಘದ ಹಲವು ವರ್ಷಗಳ ಮನವಿಗೆ ಸ್ಪಂದಿಸಿರುವ ರಾಜ್ಯ ಸರಕಾರದ ನಿರ್ಧಾರದ ಬಗ್ಗೆ ಹರ್ಷವ್ಯಕ್ತಪಡಿಸಿದ ಸಂಘದ ಅಧ್ಯಕ್ಷ ಡಾ.ಎಸ್‌.ಸಿ ಸುರೇಶ್‌, ಕಳೆದ 8 ವರ್ಷಗಳಿಂದ ತಾಂತ್ರಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಇಲಾಖೆಯ ಪುನರ್‌ ರಚನೆಯ ಆದೇಶವನ್ನು ಜಾರಿಗೊಳಿಸಿರಲಿಲ್ಲಾ. ಈ ಸಂಬಂಧ ಸಂಘವು ನಿರಂತರವಾಗಿ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿತ್ತು. ಮಾನ್ಯ ಪ್ರಭು ಚವ್ಹಾಣ್‌ ಅವರು ಪಶುಪಾಲನಾ ಇಲಾಖೆಯ ಸಚಿವರಾದ ನಂತರ ಅನೇಕ ಸಭೆಗಳನ್ನು ನಡೆಸಿ ದಿಟ್ಟ ನಿರ್ಧಾರ ತಗೆದುಕೊಂಡ ಫಲವಾಗಿ ಪಶುವೈದ್ಯರ ಬೇಡಿಕೆಗಳು ಇದೀಗ ಜಾರಿಯಾಗಿವೆ.

Contact Your\'s Advertisement; 9902492681

ಕೇವಲ ಮೂರು ದಿನಗಳಲ್ಲಿಯೇ ಮುಖ್ಯ ಪಶುವೈದ್ಯಾಧಿಕಾರಿಗಳ ಜ್ಯೇಷ್ಟತಾ ಪಟ್ಟಿಯನ್ನು ಪ್ರಕಟಿಸಿ ಸೇವಾ ಹಿರಿತನದ ಹಿನ್ನಲೆಯಲ್ಲಿ ಉಪ ನಿರ್ದೇಶಕರಾಗಿ ಮುಂಬಡ್ತಿ ನೀಡಲು ಡಿಪಿಸಿ ಮಾಡಿ ಅದೇ ದಿನ ಸ್ಥಳ ನಿಯುಕ್ತಿಗೆ ಆದೇಶ ಹೊರಡಿಸಿರುವ ಸಚಿವರ ದಿಟ್ಟ ಹಾಗೂ ಪಾರದರ್ಶಕ ಕ್ರಮಗಳನ್ನು ಕರ್ನಾಟಕ ಪಶುವೈದ್ಯಕೀಯ ಸಂಘವು ಅಭಿನಂದಿಸಿ ಶ್ಲಾಘಿಸುತ್ತದೆ. ಈ ಎಲ್ಲಾ ಕೆಲಸಗಳಿಗೆ ಪೂರಕವಾಗಿ ಸ್ಪಂದಿಸಿದ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಕ್ಯಾಪ್ಟನ್‌ ಮಣಿವಣ್ಣನ್‌ ಹಾಗೂ ಇಲಾಖೆಯ ಎಲ್ಲಾ ಉನ್ನತ ಅಧಿಕಾರಿಗಳಿಗೆ ಸಂಘವು ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಹೇಳಿದರು.

ಕರ್ನಾಟಕ ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಿವರಾಮ್‌.ಎ.ಡಿ ಮಾತನಾಡಿ, 2011 ರಲ್ಲಿ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರಿ ಬಿ ಎಸ್‌ ಯಡಿಯೂರಪ್ಪನವರು ಮಂಡಿಸಿದ ಪ್ರಥಮ ಕೃಷಿ ಬಜೆಟ್‌ನಲ್ಲಿ ಪಶುಪಾಲನಾ ಇಲಾಖೆಯ ಪುನರ್‌ ರಚನೆಗೆ ಮುನ್ನಡಿ ಬರೆದರು. ಅದರಂತೆ 6.3 ಕೋಟಿ ರೂ ಹಣ ನಿಗದಿಪಡಿಸಿ ರೈತರ ಬೆನ್ನೆಲುಬಾದ ಪಶುಸಂಗೋಪನೆಗೆ ಅದರಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಮೂಲಕ ಇಲಾಖೆಗೆ ಭದ್ರ ಬುನಾದಿ ಹಾಕಿದರು. 2011 ರಲ್ಲಿ ಪ್ರಾರಂಬವಾದ ಇಲಾಖೆಯ ಪುನರ್‌ ರಚನೆ ಇಂದು ಮಾನ್ಯ ಮುಖ್ಯಮಂತ್ರಿಗಳ ಮತ್ತೊಂದು ಅವಧಿಯಲ್ಲಿಯೇ ಪೂರ್ಣಗೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ. ಪಶುಪಾಲನಾ ಇಲಾಖೆಗೆ ಹೊಸ ಕಾಯಕಲ್ಪ ನೀಡಿದ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪನವರಿಗೆ ಕರ್ನಾಟಕ ಪಶುವೈದ್ಯಕೀಯ ಸಂಘವು ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಬದಲಾದ ದಿನಗಳಲ್ಲಿ ಎ ಗ್ರೂಪ್‌ ವೇತನ ಶ್ರೇಣಿ ಮಾರ್ಪಾಡಾಗಿದ್ದನ್ನು ಹೊರತುಪಡಿಸಿ ಇತರೆ ಎಲ್ಲಾ ಬೇಡಿಕೆಗಳು ತಾಂತ್ರಿಕ ಕಾರಣಗಳಿಂದ ಜಾರಿಯಾಗಿರಲಿಲ್ಲ. ಮಾನ್ಯ ಪ್ರಭು ಚವ್ಹಾಣ್‌ ಅವರು ಸಚಿವರಾಗಿ ಇಲಾಖೆಯ ಜವಾಬ್ದಾರಿ ಹೊತ್ತ ಕೂಡಲೇ ಹತ್ತಾರು ರೈತ ಸ್ನೇಹೀ ಕಾರ್ಯಕ್ರಮಗಳನ್ನು ಜಾರಿಗೆ ತರುವ ಹಾಗೂ ಪೂರಕವಾಗಿ ಇಲಾಖೆಯ ಪಶುವೈದ್ಯರ ಬೇಡಿಕೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಮ್ಮ ದಿಟ್ಟತನ, ದೂರದರ್ಶಿತ್ವ ಹಾಗೂ ಕ್ರಿಯಾಶೀಲತೆ ಮರೆದಿದ್ದಾರೆ. ಇದರಿಂದ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಶುವೈದ್ಯಾಧಿಕಾರಿಗಳ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿ, ಒಂದೇ ಹಂತದಲ್ಲಿ 66 ಉಪನಿರ್ದೇಶಕರ ಹುದ್ದೆಗಳಿಗೆ ಬಡ್ತಿ ಮತ್ತು ಸ್ಥಳ ನಿಯುಕ್ತಿ ಹಾಗೂ ಸ್ತಾತಕೋತ್ತರ ಪದವೀಧರರಿಗೆ ವಿಶೇಷ ಭತ್ಯೆ ಮತ್ತು ರಾಜ್ಯಾದ್ಯಂತ ತಜ್ಞ ಪಶುವೈದ್ಯರುಗಳ ಸೃಷ್ಟಿ ಮುಂತಾದ ಬೇಡಿಕೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ಜಾರಿಗೊಳಿಸಿರುವುದು ಶ್ಲಾಘನೀಯ ಎಂದರು.

ಅಲ್ಲದೆ, ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಪಶುವೈದ್ಯಕೀಯ ಪದವೀಧರ ವೈದ್ಯರು ಇದ್ದಾರೆ. ಕರೋನಾ ಸಂಧರ್ಭದಲ್ಲಿ ಅವರ ಜೀವನ ನಡೆಯುವುದು ಕಷ್ಟವಾಗಿದೆ. ರಾಜ್ಯ ಸರಕಾರ ಅವರ ತಾಂತ್ರಿಕ ಜ್ಞಾನದ ಸೇವೆಯನ್ನು ಪಡೆದುಕೊಳ್ಳಲು ನೇಮಕ ಮಾಡಿಕೊಳ್ಳುವ ಮೂಲಕ ರೈತಾಪಿ ವರ್ಗಕ್ಕೆ ಇನ್ನು ಹೆಚ್ಚಿನ ಅನುಕೂಲ ಮಾಡಿಕೊಡಬಹುದಾಗಿದೆ. ಹೈನುಗಾರಿಕೆ ಯನ್ನು ಪ್ರೋತ್ಸಾಹಿಸಲು ಅವರನ್ನು ಬಳಸಿಕೊಳ್ಳಬೇಕೆಂದು ಪ್ರಧಾನ ಕಾರ್ಯದರ್ಶಿ ಡಾ.ಎ.ಡಿ.ಶಿವರಾಮ್ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here