ಕೋವಿಡ್ 19 ನಿಯಂತ್ರಿಸುವಲ್ಲಿ ಸರ್ಕಾರ ವಿಫಲ

0
28

ಜೇವರ್ಗಿ: ತಾಲೂಕಿನ ಮಿನಿ ವಿಧಾನಸೌಧ ಎದುರುಗಡೆ ಕಾಂಗ್ರೆಸ್ ಪಕ್ಷದ ವತಿಯಿಂದ ಬಿಜೆಪಿ ಸರ್ಕಾರದ ವಿರುದ್ಧ ”ಜನ ಧ್ವನಿ ಧರಣಿ ಸತ್ಯಾಗ್ರಹ ” ನಡೆಯಿತು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ್ ಪಾಟೀಲ್ ಮಾತನಾಡಿ ಸರ್ಕಾರದ ವಿರುದ್ಧ ಗುಡುಗಿದರು. ಬಿಜೆಪಿ ಸರಕಾರ ಕೋವಿಡ್ 19 ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ನೆರೆಹಾವಳಿಯಿಂದ ಜನರು ಬೇಸತ್ತು ತಮ್ಮ ಮನೆಮಠಗಳು ಆಸ್ತಿಗಳು ಕಳೆದುಕೊಂಡಿದ್ದಾರೆ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಈ ಸರ್ಕಾರ. ಕೇವಲ ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಅಧಿಕಾರಿಗಳಿಗೆ ವರ್ಗಾವಣೆ ಮಾಡುವಲ್ಲಿ ಬಿಜಿಯಾಗಿದೆ .ಈ ಸರ್ಕಾರ ರೈತರ ಮತ್ತು ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದು ಅನೇಕ ಸಮಸ್ಯೆಗಳ ಸರಮಾಲೆಗಳು ಹುಟ್ಟಿಕೊಂಡಿದೆ ಅದನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಿದ್ದಲಿಂಗ ರೆಡ್ಡಿ ಇಟಗ, ಕಾಂಗ್ರೆಸ್ ಯುವ ಮುಖಂಡರಾದ ರಾಜಶೇಖರ್ ಸಿರಿ, ಕಾಶಿಂ ಪಟೇಲ್ ಮುದವಾಳ, ಚಂದ್ರಶೇಖರ್ ನೀರಡಗಿ, ರವಿ ಕೊಳುಕೊರ, ಸಲೀಂ ಕಣ್ಣಿ, ರಿಯಾಜ್ ಪಟೇಲ್, ಮಲ್ಲಿಕಾರ್ಜುನ್ ಬೂದಿಹಾಳ, ಸಂತೋಷ ಗುಡೂರ್, ಲಿಂಗರಾಜ್ ಮಾಸ್ಟರ್, ಕಾಂಗ್ರೆಸ್ ಪಕ್ಷದ ಯುವ ಮತ್ತು ಹಿರಿಯ ನಾಯಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here