ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ಜಾತ್ರೆ ರದ್ದು:  ಚೆನ್ನಮಲ್ಲಿಕಾರ್ಜು ಶ್ರೀ

0
87

ಸುರಪುರ: ಪ್ರತಿವರ್ಷ ಶ್ರಾವಣ ಮಾಸದ ಐದನೆ ಸೋಮವಾರ ನಡೆಯುತ್ತಿದ್ದ ಶ್ರೀ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರೆಯನ್ನು ಈ ವರ್ಷ ರದ್ದುಪಡಿಸಲಾಗಿದೆ ಎಂದು ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಈ ತಿಂಗಳು 24 ರಂದು ಶ್ರೀ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರೆಯನ್ನು ಆಚರಿಸಬೇಕಿತ್ತು.ಆದರೆ ದೇಶದಲ್ಲಿ ಕೋವಿಡ್-19 ಕೊರೊನಾ ವೈರಸ್ ಹಾವಳಿ ಹೆಚ್ಚಿದ್ದರಿಂದಾಗಿ ಮುಂಜಾಗ್ರತೆ ವಹಿಸಿ ಈ ವರ್ಷ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.

Contact Your\'s Advertisement; 9902492681

ಶ್ರೀಮರಡಿ ಮಲ್ಲಿಕಾರ್ಜುನ ದೇವರ ಸಕಲ ಭಕ್ತಾದಿಗಳು ಈ ವರ್ಷ ಜಾತ್ರೆಗೆ ಬರದೆ ಮನೆಯಲ್ಲಿಯೆ ಇದ್ದು ದೇವರ ಧ್ಯಾನ ಮತ್ತು ಪೂಜೆಯನ್ನು ನೆರವೇರಿಸುವಂತೆ ತಿಳಿಸುವ ಜೊತೆಗೆ ಕೊರೊನಾ ವೈರಸ್ ಹಾವಳಿಯಿಂದ ಮುಕ್ತವಾಗಲು ಎಲ್ಲರು ಮುಖಗವಸು ಧರಿಸುವ ಜೊತೆಗೆ ಸಾಮಾಜಿಕ ಅಂತರವನ್ನು ಸದಾಕಾಲ ಕಾಪಾಡುವಂತೆ ಅವರ ಭಕ್ತರಿಗೆ ಕರೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here