ಸತ್ಯಂಪೇಟೆಯಲ್ಲಿನ ರಸ್ತೆಗಳ ದುರಸ್ಥಿಗೊಳಿಸಲು ಎಲ್‌ಜೆಪಿ ಮುಖಂಡನ ಆಗ್ರಹ

0
66

ಸುರಪುರ: ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ ೩೦ರ ಸತ್ಯಂಪೇಟೆಯಲ್ಲಿನ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು ದುರಸ್ಥಿಗೊಳಿಸುವಂತೆ ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ್ ಸರಕಾರಕ್ಕೆ ಒತ್ತಾಯಿಸಿದರು.

ರಸ್ತೆಯಲ್ಲಿನ ತಗ್ಗು ಗುಂಡಿಗಳ ಬಳಿಯಿದ್ದು ಮಾತನಾಡಿದ ಅವರು,ನಮ್ಮ ಸತ್ಯಂಪೇಟೆಯಲ್ಲಿನ ಎಲ್ಲಾ ರಸ್ತೆಗಳು ಹಾಳಾಗಿವೆ.ಕಳೆದ ೫ ವರ್ಷಗಳ ಹಿಂದೆ ಯುಜಿಡಿ ಅಡಿಯಲ್ಲಿ ರಸ್ತೆ ನಿರ್ಮಿಸಲಾಗಿತ್ತು,ಆದರೆ ಅಂದು ನಿರ್ಮಿಸಿದ ರಸ್ತೆಗಳು ಇಂದು ಸಂಪೂರ್ಣ ಕಿತ್ತಿಹೋಗಿವೆ.ನಗರಸಭೆ ಗ್ರಾಮದತ್ತ ಸ್ವಲ್ಪವು ಗಮನಹರಿಸುತ್ತಿಲ್ಲ.ಕೇವಲ ಗ್ರಾಮದಲ್ಲಿನ ರಸ್ತೆಗಳು ಮಾತ್ರವಲ್ಲದೆ ಹಸನಾಪುರ ಪೆಟ್ರೋಲ್ ಬಂಕ್‌ನಿಂದ ರಾಯಚೂರು ಹೆದ್ದಾರಿಗೆ ತಲಪುವ ಕೊಳ್ಳೂರು ವರೆಗಿನ ರಸ್ತೆಯು ಹಾಳಾಗಿದೆ.ತಗ್ಗು ಗುಂಡಿಗಳಿಂದ ತುಂಬಿದ್ದರಿಂದ ಮಳೆಗಾಲವಾಗಿದ್ದರಿಂದ ರಸ್ತೆಯಲ್ಲಿ ಓಡಾಡಲಾಗದಂತಾಗಿದೆ.ಗುಂಡಿಗಳಲ್ಲಿ ನೀರು ತುಂಬಿದ್ದರಿಂದ ಈ ರಸ್ತೆಯಲ್ಲಿ ಹೋಗುವಾದ ಅನೇಕಬಾರಿ ವಾಹನಗಳು ಅಪಘಾತಕ್ಕೀಡಾಗಿ ತೊಂದರೆ ಅನುಭವಿಸಿರುವ ಘಟನೆಗಳು ನಡೆದಿವೆ.

Contact Your\'s Advertisement; 9902492681

ಆದ್ದರಿಂದ ಇಂದು ಸತ್ಯಂಪೇಟೆಯ ಎಲ್ಲಾ ಗ್ರಾಮಸ್ಥರು ಆಗ್ರಹಿಸುತ್ತಿದ್ದು ನಗರಸಭೆ ಕೂಡಲೆ ರಸ್ತೆ ದುರಸ್ಥಿಗೊಳಿಸಬೇಕು ಮತ್ತು ಕೊಳ್ಳೂರಿಗೆ ತಲುಪುವ ರಸ್ತೆ ಕಾಮಗಾರಿ ಅರ್ಧಂಬರ್ಧ ಮಾಡಿ ನಿಲ್ಲಿಸಿರುವುದನ್ನು ಕೂಡಲೆ ಮುಗಿಸುವಂತೆ ಆಗ್ರಹಿಸಿದರು.ಒಂದು ವೇಳೆ ರಸ್ತೆ ದುರಸ್ಥಿಗೊಳಿಸದಿದ್ದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here