ಯೋಧ ಶರಣು ಹೊಸ್ಮನಿಗೆ ಸನ್ಮಾನಿಸಿ ಸೇವೆಗೆ ಬೀಳ್ಕೊಟ್ಟ ದೇಶಪ್ರೇಮಿಗಳು

0
37

ಸುರಪುರ: ತಾವೆಲ್ಲರು ಇಂದು ನನ್ನನ್ನು ಮನದುಂಬಿ ಹಾರೈಸುವ ಜೊತೆಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಸೇವೆಗೆ ಬೀಳ್ಕೊಡುತ್ತಿರುವುದು ತುಂಬಾ ಸಂತೋಷ ಮೂಡಿಸಿದೆ ಎಂದು ಭಾರತೀಯ ಸೇನೆಯ ಯೋಧ ಶರಣು ಹೊಸ್ಮನಿ ಸತ್ಯಂಪೇಟೆ ಮಾತನಾಡಿದರು.

ನಗರದ ಸರದಾರ್ ವಲ್ಲಭಬಾಯಿ ಪಟೇಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸುರಪುರ ನಾಗರಿಕರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ,ನೀವು ಮಾಡಿದ ಈ ಸನ್ಮಾನ ಮತ್ತು ಹಾರೈಕೆ ನಾನು ಭಾರತೀಯ ಸೇನೆಯಲ್ಲಿ ಇನ್ನಷ್ಟು ವರ್ಷಗಳು ಸೇವೆ ಸಲ್ಲಿಸಲು ಶಕ್ತಿ ತುಂಬಿದೆ.ತಾವೆಲ್ಲರು ತೋರಿಸಿದ ಈ ಅಭಿಮಾನ ಮತ್ತು ಹಾರೈಕೆ ನನ್ನ ಸೇವೆಯ ಕುರಿತು ಹೆಮ್ಮೆಮೂಡಿಸಿದೆ ಎಂದರು.

Contact Your\'s Advertisement; 9902492681

ಯೋಧನನ್ನು ಸನ್ಮಾನಿಸಿದ ಮುಖಂಡ ರಾಜಾ ಪಿಡ್ಡನಾಯಕ ಮಾತನಾಡಿ,ಇಂದು ದೇಶದ ಜನರು ನೆಮ್ಮದಿಯಿಂದ ಇರಲು ನಮ್ಮ ನಗರದ ಹೆಮ್ಮೆಯ ಯೋಧ ಶರಣು ಹೊಸ್ಮನಿಯಂತಹ ಲಕ್ಷಾಂತರ ಜನ ಯೋಧರ ನಿತ್ಯದ ಸೇವೆಯ ದಯೆಯಿಂದ.ಗಡಿಯಲ್ಲಿ ಯೋಧರು ಹಗಲಿರುಳು ಜೀವದ ಹಂಗು ತೊರೆದು ಸೇವೆ ಮಾಡುತ್ತಿರುವುದರಿಂದ ದೇಶ ಸುಭದ್ರವಾಗಿದೆ.ನಾವೆಲ್ಲರು ದೇವರಂತೆ ನಿತ್ಯವು ಯೋಧರನ್ನು ಸ್ಮರಿಸಬೇಕೆಂದರು.

ಇದೇ ಸಂದರ್ಭದಲ್ಲಿ ಅನೇಕರು ಯೋಧನಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿ ಸಿಹಿ ತಿನ್ನಿಸಿ ಸೇವೆ ಬೀಳ್ಕೊಟ್ಟರು.ಈ ಸಂದರ್ಭದಲ್ಲಿ ಗುರುನಾಥ ರೆಡ್ಡಿ ಸಚಿನ್ ಕುಮಾರ ನಾಯಕ ಅನಿಲ ಬಿಲ್ಹಾಳ ಮಹೇಶ ಪಾಟೀಲ್ ಮಂಥನ ನಾಯಕ ಸುಣ್ಣದ ಮನಿ ಸಂತೋಷಗೌಡ ಪ್ರವೀಣ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here