ಸೆಲ್ಫಿ ತೆಗೆಯಲು ಹೋಗಿ ಕೆರೆಯಲ್ಲಿ ಮುಳುಗಿ ಯುವಕ ಸಾವು

0
210

ಕಲಬುರಗಿ: ಕೆರೆಯಲ್ಲಿ ಸೆಲ್ಫಿ ಮತ್ತು ಈಜಾಡಲು ಹೋಗಿ 20 ವರ್ಷದ ಯುವಕ ಮೃತಪಟ್ಟಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಭೋಸಗಾ ಕರೆಯಲ್ಲಿ ಇಂದು ನಡೆದಿದೆ.

ನ್ಯೂ ರಾಘವೇಂದ್ರ ಕಾಲೋನಿಯ ನಿವಾಸಿಯಾರಿರುವ ಎಜಾಜ್ ಅಹ್ಮದ್ ಎಕ್ಬಲ್ (20) ಮೃತಪಟ್ಟ ಯುವಕ ಇಂದು ಕೆಲವು ಸ್ನೇಹಿತರೊಂದಿಗೆ ಭೋಸಗಾ ಕೆರೆಯಲ್ಲಿ ಈಜಾಡಲು ತೆರಳಿದರು. ಮೃತ ಎಜಾಜ್ ಇಜಾಡಿ ಸೆಲ್ಫಿ ತೆಗೆಯುತ್ತಿದ ವೇಳೆ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Contact Your\'s Advertisement; 9902492681

ಘಟನಾ ಸ್ಥಳಕ್ಕೆ ಎಸಿಪಿ ಸುಬೇದಾರ ಮಾರ್ಗದರ್ಶನದ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಸೋಮನಾಥ್ ಕಿರದಳ್ಳಿ ನೇತೃತ್ವದ ತಂಡದ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ನೀರಿನಲ್ಲಿ ಮುಳುಗಿದ ಮೃತಪಟ್ಟ ಶವವನ್ನು ನೀರಿನಿಂದ ಹೊರಗಡೆ ತೆಗೆದ ರಣೋತ್ತರಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here