ನಾಳೆ ‌ವಚನ ದಿನಾಚರಣೆ ನಿಮಿತ್ತ ಬಹುಮಾನ ವಿತರಣೆ

0
81

ಕಲಬುರಗಿ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ನಾಳೆ ಆಗಸ್ಟ್ 29 ವಚನ ದಿನಾಚರಣೆ ನಿಮಿತ್ತ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳಲಾಗಿದೆ ಎಂದು ಪರಿಷತ್ ಅಧ್ಯಕ್ಷರಾದ ಕುಪೇಂದ್ರ ಪಾಟೀಲ್ ತಿಳಿಸಿದ್ದಾರೆ.

ಬಹುಮಾನ ವಿಜೇತ ಸ್ಪರ್ಧೆಗಳ ವಿವರ: ಶಾಲಾ-ಕಾಲೇಜು ವಿಭಾಗದ, ಸತ್ಯಂ ಪಿಯುಸಿ ಕಾಲೇಜು ಅರುಣಾ ಶಂಕರ, ಡಾ. ಅಂಬೇಡ್ಕರ್ ಡಿಗ್ರಿ ಕಾಲೇಜ ಮರೆಪ್ಪ ಎಸ್ ಮುಧೋಳ್, ವಿಶ್ವನಾಥ್ ರಡ್ಡಿ ಮುದ್ನಾಳ್ ಕಾಲೇಜನ ನಿರಂಜನ್ ಎಸ್ ಮಠಪತಿ ಹಾಗೂ ಏನ್. ವಿ ಬಿ. ಎಡ್ ಕಾಲೇಜ ಅವಿನಾಶ್ ಬಿ ಎಸ್.

Contact Your\'s Advertisement; 9902492681

ಸಾರ್ವಜನಿಕರ ವಿಭಾಗದ ಪ್ರಥಮ ಬಹುಮಾನ ವೆಂಕಟೇಶ್ ಜನಾದ್ರಿ, ದ್ವಿತೀಯ ಸಾಕ್ಷಿ ಎಸ್ ಸತ್ಯಂಪೇಟೆ, ತೃತೀಯ ಮೇಘಶ್ರೀ ಶಿವಪುತ್ರ ಹಾಗೂ ರೇಣುಕಾ ರಮೇಶ್ ಬಹುಮಾನ ವಿಜೇತರು.

ನಾಳೆ ಅಪರಾಹ್ನ 11:30ಕ್ಕೆ ವಿಶ್ವನಾಥರೆಡ್ಡಿ ಮುದ್ನಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದಲ್ಲಿ ನಿಜಗುಣಿ ಎಸ್.ಡಿ, ಕಾವ್ಯಶ್ರೀ ಮಹಾಗಾಂವಕರ್, ಕುಪೇಂದ್ರ ಪಾಟೀಲ ಹಾಗೂ ಡಾಮ ಪ್ರೇಮಾ ಅಪಚಂದ ಅವರು ಕಾರ್ಯಕ್ರಮದ ಗಣ್ಯರಾಗಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here