ಗೆಳತಿಯರನ್ನು ರಕ್ಷಿಸಿ ಮೃತಪಟ್ಟ ಬಾಲಕಿ

0
70

ವಾಡಿ: ಕಲ್ಲು ಗಣಿಯ ನೀರಿನಲ್ಲಿ ಈಜಾಡಲು ಮುಂದಾಗಿ ಈಜುಬಾರದೆ ಮುಳುಗುತ್ತಿದ್ದ ಗೆಳತಿಯರನ್ನು ರಕ್ಷಿಸಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ರವಿವಾರ ಹಳಕರ್ಟಿ ಗ್ರಾಮದಲ್ಲಿ ಸಂಭವಿಸಿದೆ.

ಹಳಕರ್ಟಿ ಗ್ರಾಮದ ಗುರುಜಿ ನಗರದ ನಿವಾಸಿ ಗುರಮ್ಮ ಭೀಮಯ್ಯ ಕೊಡಚಿ (14) ಮೃತಪಟ್ಟ ಬಾಲಕಿ. ಎಂದಿನಂತೆ ತನ್ನ ವಾರಿಗೆಯ ಗೆಳತಿಯರಾದ ರಕ್ಷಿತಾ (13) ಹಾಗೂ ರೇಣುಕಾ (12) ಅವರೊಂದಿಗೆ ಮೃತ ಗುರಮ್ಮ ಪಾಳು ಕಲ್ಲು ಗಣಿಯ ನೀರಿನಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಳೆ. ಇದೇ ವೇಳೆ ನೀರಿಗಿಳಿದು ಮೂವರೂ ಈಜಲು ಮುಂದಾಗಿದ್ದಾರೆ. ಮೃತ ಗುರಮ್ಮಗೆ ಈಜು ಬರುತ್ತಿತ್ತು ಎನ್ನಲಾಗಿದ್ದು, ನೀರಿನಲ್ಲಿ ಮುಳುಗುತ್ತಿದ್ದ ಈಜು ಬಾರದ ಗೆಳತಿಯರನ್ನು ರಕ್ಷಿಸಲು ಹೋಗಿ ನೀರಿನಿಂದ ಹೊರ ಬರಲಾಗದೆ ಮೃತಪಟ್ಟಿದ್ದಾಳೆ.

Contact Your\'s Advertisement; 9902492681

ರಕ್ಷಿತಾ ಮತ್ತು ರೇಣುಕಾ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೆಳತಿಯರ ಪ್ರಾಣ ಉಳಿಸಿ ಮೃತಪಟ್ಟ ಬಾಲಕಿಯ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವಾಡಿ ನಗರ ಠಾಣೆ ಪಿಎಸ್‍ಐ ವಿಜಯಕುಮಾರ ಭಾವಗಿ ಹಾಗೂ ಸಿಬ್ಬಂದಿ, ಶವ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here