ಕಲಬುರಗಿ: ನೀರಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

0
95

ಕಲಬುರಗಿ: ಕಲ್ಲು ಗಣಿಯಲ್ಲಿ ಸಂಗ್ರಹವಾಗಿದ್ದ ನೀರಿಗೆ ಹಾರಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಾಡಿಯಲ್ಲಿ ಸಂಭವಿಸಿದೆ.

ಪಟ್ಟಣದ ಪಿಲಕಮ್ಮಾ ಏರಿಯಾ ನಿವಾಸಿ ಅಭಿಶೇಕ ಅಮೃತಕುಮಾರ ಭಂಡಾರಿ (17) ಮೃತ ವಿದ್ಯಾರ್ಥಿ. ಆ.30 ರಂದು ಮನೆಯಿಂದ ನಾಪತ್ತೆಯಾಗಿದ್ದ ಈತ ನಾಲ್ಕು ದಿನಗಳ ನಂತರ ಬುಧವಾರ ಸ್ಥಳೀಯ ಇಂದ್ರಾ ನಗರ ಗುಸ್ತಾಜ್‍ಸೇಠ ಇರಾಣಿ ಪ್ರದೇಶದ ಕಲ್ಲು ಗಣಿಯ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

Contact Your\'s Advertisement; 9902492681

ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೃತ ವಿದ್ಯಾರ್ಥಿ ಅಭಿಶೇಕ ಶೇ.81 ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‍ಐ ವಿಜಯಕುಮಾರ ಭಾವಗಿ, ಶವ ಪರೀಕ್ಷೆ ನಡೆಸಿದ್ದಾರೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here