ಸೆ. 13ರಂದು ನರಸಿಂಗರಾವ ಹೇಮನೂರ ಅವರ ‘ನೆನಪು ನೂರು ನೂರು ತರಹ’ ಪುಸ್ತಕ ಬಿಡುಗಡೆ

0
107

ಕಲಬುರಗಿ: ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ, ಸಂಸ್ಕತಿ ಪ್ರಕಾಶನ ಸೇಡಂ ಪ್ರಕಟಿಸಿರುವ ಹಿರಿಯ ಕವಿ ನರಸಿಂಗರಾವ ಹೇಮನೂರ ಅವರ “ನೆನಪು ನೂರು ನೂರು ತರಹ'” ಪುಸ್ತಕ ಬಿಡುಗಡೆ ಸಮಾರಂಭ ಸೆ. 13ರಂದು ಬೆಳಗ್ಗೆಬ10.30ಕ್ಕೆ ಅನ್ನಪೂರ್ಣ ಕ್ರಾಸ್ ಬಳಿ ಇರುವ ಕಲಾ ಮಂಡಳದಲ್ಲಿ ಆಯೋಜಿಸಲಾಗಿದೆ ಎಂದು ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಬಿ.ಎಚ್. ನಿರಗುಡಿ, ಸಂಸ್ಕೃತಿ ಪ್ರಕಾಶನದ ಪ್ರಭಾಕರ ಜೋಶಿ ತಿಳಿಸಿದ್ದಾರೆ.

ಹುಮನಾಬಾದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಅಜೇಂದ್ರ ಮಹಾಸ್ವಾಮಿ ಏಕದಂಡಗಿಮಠ ಸಾನ್ನಿಧ್ಯ ವಹಿಸಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

Contact Your\'s Advertisement; 9902492681

ಹಿರಿಯ ಸಾಹಿತಿ ಪ್ರೊ.‌ ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಭೀಮರಾಯ ಹೇಮನೂರ ಪುಸ್ತಕ ಪರಿಚಯ ಮಾಡುವರು. ಮುಖ್ಯ ಅತಿಥಿಗಳಾಗಿ ಪ. ಮಾನು ಸಗರ ಆಗಮಿಸಲಿದ್ದಾರೆ. ಕವಿ ನರಸಿಂಗರಾವ ಹೇಮನೂರ ಉಪಸ್ಥಿತರಿರುವರು ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here