ಶಾಸಕ ಸುಭಾಷ್ ಗುತ್ತೇದಾರ ಚೇತರಿಕೆ: ಘಂಟೆ

0
25

ಆಳಂದ: ಕೊರೋನ ಸೋಂಕಿಗೆ ಒಳಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ಸುಭಾಷ್ ಗುತ್ತೇದಾರ ಅವರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಹಿರಿಯ ಮುಖಂಡ ಚಂದ್ರಾಮಪ್ಪ ಘಂಟೆ ಅವರು ತಿಳಿಸಿದ್ದಾರೆ.

ಈ ಕುರಿತು ಸೋಮವಾರ ಹಾವೇರಿಯ ಶಿವಲಿಂಗೇಶ್ವರ ಮಠದಲ್ಲಿನ ಗದ್ದುಗೆಗೆ ವಿಶೇಷ ಪೂಜೆ ಕೈಗೊಂಡು ಶಾಸಕರೂ ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥನೆ ಕೈಗೊಂಡಿದ್ದ ಅವರು ಬಳಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು. ತಾಲೂಕಿನ ಆಳಂದ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಶಾಸಕರ ಹಿತೈಸಿಗಳು ಅವರ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ ಕೈಗೊಂಡಿದ್ದರು. ದೇವರ ಅನುಗೃಹ ಕಾರ್ಯಕರ್ತರ ಪ್ರಾರ್ಥನೆಯ ಪ್ರತಿಫಲವಾಗಿ ಶಾಸಕರು ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮತ್ತೊಂದಡೆ ಶಾಸಕರು ಗುಣಮುಖವಾಗಿ ಮತ್ತೆ ಜನ ಸೇವೆಗೆ ಸಿದ್ಧರಾಗಿ ಶೀಘ್ರವೆ ಕ್ಷೇತ್ರಕ್ಕೆ ಬರಲಿದ್ದಾರೆ. ಶಾಸಕರ ಆರೋಗ್ಯ ಸುಧಾರಿಸಲೆಂದು ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೆ ಅನಂತ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಶಾಸಕರ ಪುತ್ರ, ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ತಿಳಿಸಿದ್ದಾರೆ.

ತಾಲೂಕಿನ ಹಲವು ಜನ ಮುಖಂಡರು, ಕಾರ್ಯಕರ್ತರು ತಮಗೆ ದೂರವಾಣಿ ಮೂಲಕ ಸಂಪರ್ಕಿಸಿ ಶಾಸಕರ ಭೇಟಿಯಾಗಲು ಬಯಸಿರುತ್ತೀರಿ ಆದರೆ ಸಧ್ಯದ ಕೋವಿಡ್ ೧೯ ರ ನಿಯಮಾವಳಿಯಂತೆ ಅವರು ಹೋಮ್ ಐಸೋಲೇಷನನಲ್ಲಿ ಇರಲು ವೈದ್ಯರು ಸೂಚಿಸಿರುವದರಿಂದ ಭೇಟಿ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಯಾರು ಕೂಡ ಬೆಂಗಳೂರಿಗೆ ಬರಬಾರದು. ಆದರಿಂದ ಎಲ್ಲರೂ ಸಹಕರಿಸಬೇಕೆಂದು ಜನತೆಗೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here