ವೀರಶೈವ ಲಿಂಗಾಯತ ಸಮಿತಿಯಿಂದ ಡಾ. ಈಶ್ವರಯ್ಯ ಮಠರಿಗೆ ನುಡಿ ನಮನ

0
40

ಸುರಪುರ: ಕಳೆದ ಕೆಲ ದಿನಗಳ ಹಿಂದೆ ನಿಧನರಾದ ಪ್ರಾಧ್ಯಾಪಕ ಡಾ: ಈಶ್ವರಯ್ಯ ಮಠ ಅವರಿಗೆ ಸುರಪುರ ತಾಲೂಕು ವೀರಶೈವ ಲಿಂಗಾಯತ ಸಮಿತಿ ಹಾಗು ಶ್ರೀ ಬಸವೇಶ್ವರ ಉಚಿತ ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಬಳಗದ ವತಿಯಿಂದ ನುಡಿ ನಮನ ಅರ್ಪಿಸಲಾಯಿತು.ನಗರದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಡಾ: ಈಶ್ವರಯ್ಯ ಮಠರ ಜೀವನ ಸಾಧನೆ ಕುರಿತು ಗುಣಗಾನ ಮಾಡಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವೀರಶೈವ ಲಿಂಗಾಯತ ಸಮಿತಿ ತಾಲೂಕು ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ, ಡಾ: ಈಶ್ವರಯ್ಯ ಮಠ ಅವರು ನಮ್ಮ ಸಮಿತಿಯ ಶ್ರೀ ಬಸವೇಶ್ವರ ಉಚಿತ ಪ್ರಸಾದ ನಿಲಯದ ಮೊದಲ ವಿದ್ಯಾರ್ಥಿಗಳಾಗಿದ್ದರು.ಡಾ: ಈಶ್ವರಯ್ಯ ಮಠ ಅವರ ಜ್ಞಾನ ಸಾಹಿತ್ಯದ ಸೇವೆ,ಅವರ ಚಿಂತನೆ ಮತ್ತು ಅವರ ಸಿದ್ಧಾಂತ ಮೆಚ್ಚುವಂತದ್ದಾಗಿತ್ತು.ಇಂದು ಅವರನ್ನು ಕಳೆದುಕೊಂಡು ನಮಗೆಲ್ಲ ತುಂಬಾ ದುಃಖವಾಗುತ್ತಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮಾತನಾಡಿದ ಚಿಂತಕ ಶಿವುಕುಮಾರ ಹಿರೇಮಠ ಮಾತನಾಡಿ,ಡಾ: ಈಶ್ವರಯ್ಯ ಮಠ ಅವರು ಒಬ್ಬ ಸಾಹಿತ್ಯದ ಸೇವಕ,ವೈಚಾರಿಕ ವಾದಿ,ಸಾಂಸ್ಕೃತಿಕ ಸಾರಥಿ,ಚಿಂತಕ ಎಲ್ಲವನ್ನು ಅವರಲ್ಲಿ ಕಂಡಿದ್ದೇವೆ.ಅವರ ವಿಚಾರ ಸ್ಪಷ್ಟತೆ ಮತ್ತು ನೇರ ನುಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.ಅವರು ಹೇಳುತ್ತಿದ್ದ ಅನುಭಾವ ಮತ್ತು ಆಧ್ಯಾತ್ಮವಿಲ್ಲದ ದೇಶ ಅಪಾಯಕ್ಕೆ ಸಿಲುಕುತ್ತದೆ ಎಂಬ ನಿಲುವು ಸತ್ಯವಾದುದಾಗಿದೆ ಎಂದರು.ಅವರು ಹೇಳಿದ ಮಾತು ಜಂಗಮ ಎನ್ನುವುದು ಸ್ಪಷ್ಟತೆಯಿತ್ತು ಆದರೆ ಅದನ್ನು ಜಂಗಮ ಎಂಬುದನ್ನು ನಾವು ಜಾತಿಯಾಗಿಸುತ್ತಿರುವುದಾಗಿ ಅವರ ವಿರೋಧವಿತ್ತು ಎಂಬ ನಿಲುವು ಚಿಂತನಾಅರ್ಹವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ,ಡಾ: ಈಶ್ವರಯ್ಯ ಮಠರ ಹಳೆಯ ವಿದ್ಯಾರ್ಥಿಗಳಾದ ಸುಭಾಸ ಪಾಟೀಲ ಬುದೂರು ಸೇರಿದಂತೆ ಅನೇಕರು ಮಾತನಾಡಿದರು.ಸಭೆಯ ಆರಂಭದಲ್ಲಿ ಡಾ: ಈಶ್ವರಯ್ಯ ಮಠದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ಈಶ್ವರಯ್ಯ ಮಠ,ಬಸವರಾಜ ರುಮಾಲ,ಪತ್ರಕರ್ತ ಸೋಮಶೇಖರ ನರಬೋಳಿ,ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ,ಸಾಹಿತಿ ಎ.ಕೃಷ್ಣಾ,ದೇವೆಂದ್ರಪ್ಪ ನರಬೋಳಿ ಸೇರಿದಂತೆ ಇತ್ತೀಚೆಗೆ ಅಗಲಿದಿ ಎಲ್ಲರನ್ನು ನೆನೆದು ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಎಲ್ಲರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಸಭೆಯ ವೇದಿಕೆ ಮೇಲೆ ಮುಖಂಡರಾದ ಬಸವಲಿಂಗಪ್ಪ ಪಾಟೀಲ ಜಿ.ಎಸ್.ಪಾಟೀಲ ಶಿವರಾಜಪ್ಪ ಗೋಲಗೇರಿ ಬಸವಲಿಂಗಪ್ಪ ಸಜ್ಜನ್ ಶಾಂತಪ್ಪ ಬೂದಿಹಾಳ ಎಮ್.ಎಸ್.ಹಿರೇಮಠ ವೀರಪ್ಪ ಆವಂಟಿ ಉಪಸ್ಥಿತರಿದ್ದು ಮಾತನಾಡಿದರು.

ಸೋಮಶೇಖರ ಶಾಬಾದಿ ನಬಿಲಾಲ ಮಕಾಂದಾರ ಶರಣಪ್ಪ ಕಲಕೇರಿ ಸಂಗಣ್ಣ ಎಕ್ಕೆಳ್ಳಿ ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಚೆನ್ನಮಲ್ಲಿಕಾರ್ಜುನ ಗುಂಡಾನೂರ ಅಯ್ಯಪ್ಪ ಅಕ್ಕಿ ಶಾಂತರಾಜ ಬಾರಿ ವಿರೇಶ ನಿಷ್ಠಿ ದೇಶಮುಖ ಈರಣ್ಣ ಕುಂಬಾರ ಕನ್ನಳ್ಳಿ ಸಿದ್ದಯ್ಯ ಸ್ಥಾವರಮಠ ಚಂದ್ರಶೇಖರ ಡೊಣೂರ ಶಿವರಾಜ ಕಲಕೇರಿ ಮಲ್ಲಿಕಾರ್ಜುನ ಕಮತಗಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here