ರಸ್ತೆ ಸರಿಪಡಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಿ” : ಬಿ.ಎಸ್.ಪಿ ಅಧ್ಯಕ್ಷ ಮಸ್ಕಿ

1
215

ಚಿತ್ತಾಪುರ: ತಾಲೂಕಿನ ಟೆಂಗಳಿ ಕ್ರಾಸ್ ನಿಂದ ತೊನಸನಹಳ್ಳಿ(ಟಿ) ಮತ್ತು ಟೆಂಗಳಿ ಗ್ರಾಮಗಳಿಗೆ ಕೂಡುವ ರಸ್ತೆ ಸುಮಾರು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು.

ವಾಹನಗಳು ಚಲಿಸಲು ತೊಂದರೆಯಾಗುತ್ತಿದೆ.ಜನರು ಪ್ರಯಾಣ ಮಾಡುವಾಗ ತಮ್ಮ ಪ್ರಾಣವನ್ನು ಕೈಯಲ್ಲಿ ಹೀಡಿದುಕೊಂಡು ಪ್ರಯಾಣಿಸುವ ಪರಿಸ್ಥಿತಿಯಲ್ಲಿ ರಸ್ತೆ ಹದಗೆಟ್ಟಿದೆ.ಇಲ್ಲಿಯವರೆಗೆ ಈ ರಸ್ತೆಯಲ್ಲಿ ಸುಮಾರು ಅಪಘಾತಗಳು ನಡೆದು ಸಾವು-ನೋವುಗಳು ಸಂಭವಿಸಿವೆ. ಮತ್ತು ವಿಶೇಷವಾಗಿ ರೈತರಿಗೆ ನಡೆಯಲು ಕೂಡ ಬಾರದ ಎತ್ತು ಬಂಡಿಗಳಿಗು ಸಹ ಚಲಿಸಲು ಬಾರದ ಪರಿಸ್ಥಿತಿಯಲ್ಲಿ ರಸ್ತೆ ಕೆಟ್ಟಿದ್ದು ಸಾರ್ವಜನಿಕರಿಗೆ ಈ ರಸ್ತೆಯಿಂದ ತುಂಬಾ ತೊಂದರೆಯಾಗುತ್ತಿದೆ.

Contact Your\'s Advertisement; 9902492681

ಈ ರಸ್ತೆ ಮುಂದೆ ಕಾಳಗಿ ಮತ್ತು ಚಿಂಚೋಳಿ ಮುಖ್ಯ ರಸ್ತೆಗೆ ಸೇರುವುದರಿಂದ ಈ ರಸ್ತೆಯ ಮೂಲಕ ವಿಧ್ಯಾರ್ಥಿಗಳು ಶಾಲಾ-ಕಾಲೇಜು ಮತ್ತು ಅಧಿಕಾರಿಗಳು ಕಛೇರಿಗಳಿಗೆ ಹೋಗುವುದರಿಂದ ತಡವಾಗಿ ಅಲ್ಲಿಗೆ ತಲುಪುತ್ತಿದ್ದಾರೆ.

ಆದ ಕಾರಣ ಚಿತ್ತಾಪೂರ ಮತ್ತು ಚಿಂಚೊಳಿ ಕ್ಷೇತ್ರದ ಶಾಸಕರಾದ ಪ್ರಿಯಾಂಕ ಖರ್ಗೆ ಹಾಗೂ ಅವಿನಾಶ ಜಾಧವ ಅವರು ಕೂಡಲೇ ಎಚ್ಚೆತ್ತು ಈ ಕಡೆ ಗಮನಹರಿಸಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಈ ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಸಂಚರಿಸಲು ಅನೂಕೂಲ ಮಾಡಿಕೊಡುವಂತೆ ಸಂಬಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಬಹುಜನ ಸಮಾಜ ಪಕ್ಷ ಚಿತ್ತಾಪೂರ ಘಟಕದ ಅಧ್ಯಕ್ಷ ಆನಂದ ಎಮ್ ಮಸ್ಕಿ ಅವರು ಒತ್ತಾಯಿಸುತ್ತಾರೆ.

ಒಂದು ವೇಳೆ ಇದನ್ನು ಕೂಡಲೇ ಪರಿಹರಿಸದಿದ್ದರೆ ಟೆಂಗಳಿ ಕ್ರಾಸ ಹತ್ತಿರ ರಸ್ತಾರೋಕ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here