ಅಶೋಕ ಗಸ್ತಿ ನಮ್ಮ ಸಮಾಜದ ಅಭಿವೃಧ್ಧಿಯ ಹರಿಕಾರರಾಗಿದ್ದರು: ಅಪ್ಪಣ್ಣ ಚಿನ್ನಾಕಾರ

0
30

ಸುರಪುರ: ಕೇವಲ ಎರಡೆ ತಿಂಗಳ ಹಿಂದೆ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದ ಅಶೋಕ ಗಸ್ತಿಯವರು ನಮ್ಮ ಸವಿತಾ ಸಮಾಜದ ಅಭಿವೃಧ್ಧಿಯ ಹರಿಕಾರರಾಗಿದ್ದರು ಎಂದು ಸವಿತಾ ಸಮಾಜ ಸಂಘದ ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕಾರ ಮಾತನಾಡಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅಶೋಕ ಗಸ್ತಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಗಸ್ತಿಯವರು ತುಂಬಾ ಕಷ್ಟದಲ್ಲಿಯೆ ಶಿಕ್ಷಣ ಪಡೆದು ವಕೀಲರಾಗಿ ಅನೇಕ ಜನರಿಗೆ ನ್ಯಾಯ ಕೊಡಿಸಿದ್ದಾರೆ.ಅವರ ಪಕ್ಷಕ್ಕಾಗಿ ದುಡಿದ ಶ್ರಮ ಮತ್ತು ಪ್ರತಿಭೆಯನ್ನು ನೋಡಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಲಾಗಿತ್ತು.ಆದರೆ ಇಂದು ಅವರು ನಮ್ಮನ್ನು ಅಗಲಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ರೈತ ಹೋರಾಟಗಾರ ಯಲ್ಲಪ್ಪ ಚಿನ್ನಾಕಾರ ಮಾತನಾಡಿ,ಅಶೋಕ ಗಸ್ತಿಯವರು ನಮ್ಮ ಸಮಾಜದ ಏಳಿಗೆಗಾಗಿ ತುಂಬಾ ಶ್ರಮ ಪಟ್ಟಿದ್ದರು.ಅವರನ್ನು ಕಳೆದುಕೊಂಡು ಸವಿತಾ ಸಮಾಜ ಬಡವಾಗಿದೆ.ಸರಕಾರ ಅಶೋಕ ಗಸ್ತಿಯವರ ನೆನಪಿಗಾಗಿ ಏನಾದರು ಯೋಜನೆಯನ್ನು ರೂಪಿಸಬೇಕು ಎಂದರು.ಅಲ್ಲದೆ ಭಗವಂತ ಗಸ್ತಿಯವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಹಾಗು ಅಶೋಕ ಗಸ್ತಿಯವರ ಆತ್ಮಕ್ಕೆ ಶಾಂತಿ ದೊರೆಯಲಿದೆ ಪ್ರಾರ್ಥಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗಸ್ತಿಯವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.

ಸಭೆಯಲ್ಲಿ ಸವಿತಾ ಸಮಾಜದ ರಾಜ್ಯ ಸಮಿತಿ ನಿರ್ದೇಶಕ ಸೂರ್ಯಕಾಂತ ಚಿನ್ನಾಕಾರ ಮುಖಂಡರ ರಮೇಶ ಚಿನ್ನಾಕಾರ ಮಂಜುನಾಥ ಚಿನ್ನಾಕಾರ ಮಂಜುನಾಥ ಅನವರ ತಿಪ್ಪಣ್ಣ ಉಟ್ಗೂರ ಬಾಲರಾಜ ಚಿನ್ನಾಕಾರ ಯಲ್ಲಪ್ಪ ದುಗನೂರ ದೇವಿಂದ್ರಪ್ಪ ಅಜ್ಜಕೊಲಿ,ನರಸಪ್ಪ ಚಿನ್ನಾಕಾರ ನರಸಪ್ಪ ಮುಂದಿನಮನಿ ಪರಶುರಾಮ ಚಿನ್ನಾಕಾರ ಬಸವರಾಜ ಗೌಡಗೇರಿ ವಿಶ್ವನಾಥ ನಸಲವಾಯಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here