ಗೋಗಿಯಲ್ಲಿ ಪೋಷಣಾ ಅಭಿಯಾನ ಮಾಸಾಚರಣೆ

0
80

ಶಹಾಪುರ : ಪೌಷ್ಟಿಕ ಆಹಾರದ ಮಹತ್ವ ನೈರ್ಮಲ್ಯ, ಶುಚಿತ್ವ,ಗರ್ಭಿಣಿ ಬಾಣಂತಿಯರ ಹಾರೈಕೆ ಕುರಿತು ಸ್ವಚ್ಛ ಭಾರತ್ ಮಿಷನ್ ಸಮಾಲೋಚಕರಾದ ಶಿವುಕುಮಾರ ಅವರು ಮನ ಮುಟ್ಟುವ ಹಾಗೆ ಹೇಳಿದರು.

ತಾಲ್ಲೂಕಿನ ಗೋಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿರುವ ಪೋಷಣಾ ಅಭಿಯಾನದ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರ ಮನೆಯ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಪರಿಸರ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಗ್ರಾಮ ಪಂಚಾಯಿತಿ ವತಿಯಿಂದ ಬಚ್ಚಲು ಗುಂಡಿ ಅಭಿಯಾನ ಮನೆಯಲ್ಲಿ ಕೈತೋಟ ನೈರ್ಮಲ್ಯ ಕುರಿತು ಸಂಪೂರ್ಣವಾಗಿ ಗ್ರಾಮದ ಜನತೆಗೆ ಸಮಗ್ರವಾದ ಮಾಹಿತಿಯನ್ನು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕರು,ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು,ಸ್ತ್ರೀಶಕ್ತಿ ಸಂಘದ ಸದಸ್ಯರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಅಂಗನವಾಡಿ ಮೇಲ್ವಿಚಾರಕಿಯರಾದ ನಂದಾ ಕಾಂಬಳೆ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಂಗೀತ ಮಹಿಳಾ ಒಕ್ಕೂಟ ಸದಸ್ಯರಾದ ಸಂಗೀತ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here