ಶಿಕ್ಷಣದಿಂದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ ಸಾಧ್ಯ: ರಾಜು ಹಿರೇಮಠ

0
38

ಕಲಬುರಗಿ: ಶಿಕ್ಷಣದಿಂದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾದ್ಯ ಎಂದು ರಾಜ್ಯ ಬೇಡ ಜಂಗಮರ ಯುವ ಸಂಘಟನೆಯ ರಾಜ್ಯ ಮುಖಂಡ ರಾಜು ಎಮ್ ಹಿರೇಮಠ ಹೇಳಿದರು, ಅವರು ಆಳಂದ ತಾಲೂಕಿನ ಗುಂಜಬಬಲಾದ ಗ್ರಾಮದ ಜೈ ಭೀಮ ತರುಣ ಸಂಘವು ಹಮ್ಮಿಕೊಂಡಿದ್ದ ಡಾ ಬಿ.ಆರ್. ಅಂಬೇಡ್ಕರ ಅವರ ಮಾಹಾನಾಯಕ ಅಂಬೇಡ್ಕರ ಧಾರವಾಹಿಯ ಪೋಸ್ಟರನ ಉದ್ಟಾಟನಾ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ದಲಿತ ಸಮುದಾಯಗಳ ಸರ್ವಾಂಗೀಣ ಅಭಿವೃದ್ದಿಯಾಗಬೇಕಾದರೆ ಮೊದಲು ಶಿಕ್ಷಣ ನಂತರ ಸಂಘಟನೆ ಜೊತೆಗೆ ಹೋರಾಟ ಅಗತ್ಯವಾಗಿದೆ, ಹೋರಾಟಗಳನ್ನು ಮಾಡುವಾಗ ಇತರರ ಹಕ್ಕುಗಳಿಗೆ ಧಕ್ಕೆ ಬಾರದಂತೆ ಪ್ರತಿಯೋಬ್ಬರು ಹೋರಾಟ ಮಾಡುವ ಹಕ್ಕುಹೊಂದಿರುತ್ತಾರೆ, ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರೀಕರಿಗೂ ಹೋರಾಟ ಮಾಡುವ ಹಕ್ಕು ನೀಡಿದೆ ಆದರೆ ಆ ಹಕ್ಕು ಇತರರ ಹಕ್ಕುಗಳ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಎಂಬ ನಿರ್ಭಂಧನೆಯೂ ಇದೆ ಇದನ್ನು ಪ್ರತಿಯೊಬ್ಬರು ಅರಿತು ಇತರರ ಹಕ್ಕುಗಳಿಗೆ ಧಕ್ಕೆಯಾಗದಂತೆ ತಮ್ಮ ತಮ್ಮ ಹಕ್ಕಿಗಾಗಿ ಕಾನೂನು ಬದ್ದ ಹೋರಾಟ ಮಾಡಲು ಮುಂದೆ ಬರಬೇಕು ಎಂದು ರಾಜು ಎಮ್ ಹಿರೇಮಠ ಅವರು ಕರೆಕೊಟ್ಟರು.

Contact Your\'s Advertisement; 9902492681

ಉಪನ್ಯಾಸಕರಾಗಿ ಆಗಮಿಸಿದ ಗೋರಖ ದೊಡ್ಮನಿ ಅವರು ಮಾತನಾಡಿ ಮಹಿಳೆಯರಿಗೆ ಶಿಕ್ಷಣದ ಹಕ್ಕು, ಯುವಕ ಯುವತಿಯರಿಗೆ ಮತಧಾನದ ಹಕ್ಕು ನೀಡಿರಿವಂತಹ ಬಾಬಾ ಸಾಹೇಬ ಅಂಬೇಡ್ಕರ ಅವರನ್ನು ಪ್ರತಿಯೊರು ಸ್ಮರಿಸಬೇಕೆಂದು ತಿಳಿಸಿದರು.

ಮುಖ್ಯ ಅಥಿತಿಯಾಗಿ ಆಗಮಿಸಿದ ಎಕ್ಸಿಕ್ಯೂಟಿವ ಇಂಜಿನಿಯರಿಂಗ ನಾಗಮೂರ್ತಿ ಅವರು ಮಾತನಾಡಿ ಎಲ್ಲ ಜನಾಂಗದ ಯುವಕರು ಮಹಿಳೆಯರು ಹಿರಿಯರು iಹಾನಾಯಕ ಅಂಬೇಡ್ಕರ ಎಂಬ ಧಾರವಾಹಿಯನ್ನು ನೋಡಬೇಕು, ಅದರಂತೆ ತಮ್ಮ ಮಕ್ಕಳನ್ನು ಬೆಳಸಬೇಕೆಂದು ಸಲಹೆ ನೀಡಿದರು.

ಮೊದಲಿಗೆ ಕಾರ್ಯಕ್ರಮವನ್ನು ಬಾಬಾ ಸಾಹೇಬ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪರಮೇಶ್ವರ ಮಾಂಗ ಸ್ವಾಗತಿಸಿದರು, ಪರಮೇಶ್ವರ ಸಿಂಗೆ ನಿರೂಪಿಸಿದರು, ಶಿವಕೂಮಾರ ಸಿಂಗೆ ವಂದಿಸಿದರು, ಕಾರ್ಯಕ್ರಮದಲ್ಲಿ ಮಾಜಿ ತಾಲೂಕಾ ಪಂ ಸದಸ್ಯರಾದ ಲಕ್ಷ್ಮಿಪುತ್ರ ಯಂಕಂಚಿ, ದಲಿತ ಸಂಘಟನೆಯ ರಾಜ್ಯಾಧ್ಯಕ್ಷರಾದ ನಾಮದೇವ ಬಬಲಾದಕರ್, ನಿವೃತ್ತ ಪಿಎಸ್ ಐ ಶಿವಪ್ಪ ಬಬಲಾದಕರ, ಮಾಜಿ ಗ್ರಾ.ಪಂ ಸದಸ್ಯರಾದ ಮಾಹಾತೇಶ ಸಿಂಗೆ, ಶ್ರೀಶೈಲ ಗಂಗಾಧರ, ಸಚೀನ, ವಿಠಲ, ಶೇಟ್ಟೆಪ್ಪ ಮುತಾಂದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here