ಹೆಳವ ಸಮಾಜದ ಅಭಿವೃದ್ಧಿಗಾಗಿ ಯುವ ಪಿಳಿಗೆಯ ಪಾತ್ರ ಮುಖ್ಯ: ಬಸವರಾಜ ಹೆಳವರ

0
178

ಕಲಬುರಗಿ: ಅಖಿಲ ಕರ್ನಾಟಕ ಹೆಳವ ಸಮಾಜ ಕಲಬುರಗಿ ಜಿಲ್ಲಾ ಘಟಕದ ಸಭೆ ವೆಬಿನಾರನಲ್ಲಿ ನಡೆಯಿತು.

ರಾಜ್ಯಾದ್ಯಕ್ಷರಾದಂತ ಎಂ.ನಾಗರಾಜು ಹಾಗೂ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದಂತ ಶರಣಪ್ಪ ಹೆಳವರ ಕೆಲೂರ ಹಾಗೂ ರಾಜ್ಯ ಮಟ್ಟದ ಎಲ್ಲಾ ಪಧಾದಿಕಾರಿಗಳು ಹಾಗೂ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Contact Your\'s Advertisement; 9902492681

ಜಿಲ್ಲಾ ಗೌರವಾದ್ಯಕ್ಷ ಮಲ್ಲಿಕಾರ್ಜುನ ಹೆಳವರ ಹೆಬ್ಬಾಳ ಸ್ವಾಗತಿಸಿದರು. ಜಿಲ್ಲಾದ್ಯಕ್ಷ ಸಾಯಬಣ್ಣ ಹೆಳವರ ಪ್ರಾಸ್ತಾವಿಕವಾಗಿ ‌ಮಾತನಾಡಿ ಅಲೆಮಾರಿ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ಬಹಳ ಅಗತ್ಯವಾಗಿದೆ ಹಾಗೂ ಪ್ರತಿಯೊಂದು ಗ್ರಾಮದಲ್ಲಿ ಅಲೆಮಾರಿ ಹೆಳವ ಸಮಾಜದ ಸಮುದಾಯ ಭವನಗಳನ್ನು ನಿರ್ಮಿಸಬೇಕು ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ರಾಜ್ಯ ನಿರ್ದೇಶಕರಾದ ಬಸವರಾಜ ಹೆಳವರ ಯಾಳಗಿ ಮಾತನಾಡಿ ಹೆಳವ ಸಮಾಜದ ಅಭಿವೃದ್ಧಿಗಾಗಿ ಗ್ರಾಮ ಮಟ್ಟದಿಂದ ಸಂಘಟನೆಯನ್ನು ಬೆಳೆಸುವುದು ಬಹಳ ಅಗತ್ಯವಾಗಿದೆ ಹಾಗೂ ಸಮಾಜದ ಯುವ ಪೀಳಿಗೆಯೂ ಕೂಡ ಸಮಾಜದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು. ಸಮಾಜದ ಸ್ವಾವಲಂಬಿ ಬದುಕಿಗಾಗಿ ಸಂಘಟನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೆಳವ ಸಮಾಜದ ಮುಖಂಡರಾದ ಬಸವಾರಾಜ ಹೆಳವರ ನಾಲತವಾಡ, ಪ್ರಭು ಹೆಳವರ ಯಾಳಗಿ, ಸಿದ್ಧರಾಮ ಬೈರಾಮಡಗಿ, ನಾಗಪ್ಪ ಹೆಳವರ, ಲಕ್ಷ್ಮಣ ಹೆಳವರ, ಸಂಗಮೇಶ ಹೆಳವರ ಹಾಗೂ ಸಂಜುಕುಮಾರ ಹೆಳವರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here