ರಾಜ್ಯ ಸರಕಾರದಿಂದ ತಳವಾರ ಪರಿವಾರಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಿನ್ನಡೆ ಉಂಟಾಗುತ್ತಿದೆ: ಮಾನೆಗಾರ

0
280

ಕಲಬುರಗಿ: ಕೇಂದ್ರ ಸರಕಾರ ಆದೇಶಿಸಿರುವಂತೆ ತಳವಾರ, ಪರಿವಾರ  ಸಮುದಾಯಗಳಿಗೆ ರಾಜ್ಯ ಸರಕಾರ ತಕ್ಷಣ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಹಿಂದುಳಿದ ವರ್ಗಗ ಶಾಶ್ವತ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೆಗಾರ ಹೇಳಿದರು.

ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ ನಡೆಸುತ್ತಿರುವ 26ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ 10ನೇ ದಿನದ ಸರದಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು ರಾಜ್ಯ ಸರಕಾರ ಕಳುಸಿಕೊಟ್ಟಂತಹ ಬುಡಕಟ್ಟು ಅಧ್ಯಯನಗಳ ವರದಿಯ ಆಧಾರದ ಮೇಲೆ ಸಂಸತ್ತಿನಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಗಳವರ ಅಂಕಿತದೊಂದಿಗೆ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ ರಾಜ್ಯಪತ್ರ ಹೊರಡಿಸಿದೆ. ಅದರಂತೆ ರಾಜ್ಯ ಸರ್ಕಾರ ಕೂಡ ಈ ಸಮುದಾಯಗಳಿಗೆ  ರಾಜ್ಯಪತ್ರ ಹೋರಡಿಸಿ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿದೆ ಅನ್ಯಯಾ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ರಾಜ್ಯ ಸರಕಾರ ತನ್ನ  ಕುರ್ಚಿ  ಉಳಿಸಿಕೊಳ್ಳಲು ಒಂದು ಜನಾಂಗವನ್ನು ಬಲಿಕೊಡಲು ಮುಂದಾಗಿದೆ. ಸರಕಾರದ ಈ ನಡೆಯಿಂದ ತಳವಾರ ಪರಿವಾರ ಸಮಾಜ ಶೈಕ್ಷಣಿಕ ಸಾಮಾಜಿಕ ಆರ್ಥಿಕ ಹಿನ್ನಡೆ ಉಂಟಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕೆಳವರ್ಗಗಳಲ್ಲಿ  ಬರುವ ಇನ್ನೂ ಹಲವಾರು ಸಮುದಾಯಗಳು ಅತ್ಯಂತ ಹಿಂದುಳಿದಿವೆ. ಅವೆಲ್ಲವೂ ಪರಿಶಿಷ್ಟ ಪಂಗಡದಲ್ಲಿ ತುರ್ತಾಗಿ ಸೇರಿಸಬೇಕು.  ತಾನು ಶಾಶ್ವತ ಹಿಂದುಳಿದ ವರ್ಗಗ ಆಯೋಗದ ಸದಸ್ಯನಾಗಿದ್ದಾಗ  ಹಿಂದುಳಿದ ವರ್ಗಗಳವರ ಸ್ಥಿತಿಗತಿ ಕುರಿತು ಸರ್ವೆ ಮಾಡಲಾಗಿದೆ ಎಂದು ತಿಳಿಸಿದರು.

ಈ ವರದಿಯನ್ನು ಸರಕಾರ ಒಪ್ಪಿಕೊಳ್ಳದೆ ಇರುವುದರಿಂದ ಹಿಂದುಳಿದ ವರ್ಗಗಳ ಜನರ ಜೀವನ  ರಾಜ್ಯದಲ್ಲಿ  ನರಕವಾಸ ಇದ್ದಂತಾಗಿದ್ದು, ಪ್ರಸ್ತುತ ರಾಜ್ಯದಲ್ಲಿರುವ ಕೋಲಿ, ಕಬ್ಬಲಿಗ, ಅಂಬಿಗ, ಗೊಂಡ ಕುರುಬ, ಕಾಡು ಕುರುಬ , ಜೇನುಕುರುಬ ಸೇರಿದಂತೆ ಇನ್ನು ಹಲವಾರು ಜಾತಿಗಳಿವೆ ಇವೆಲ್ಲವೂ ಅತ್ಯಂತ ಹಿಂದುಳಿದ ಸಮುದಾಯಗಳಾಗಿವೆ ಆ ವರದಿಯ ಪ್ರಕಾರ ಇವರೆಲ್ಲರನ್ನೂ ಅತಿಶೀಘ್ರದಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದರು.

ಈ ಸಂದರ್ಭದಲ್ಲಿ ಶರಣ ಕೊತಲಪ್ಪ ಮುತ್ತ್ಯ ತೊನಸನಹಳ್ಳಿ, ಡಾ. ಸರ್ದಾರ ರಾಯಪ್ಪ, ಸುನಿತಾ ಎಮ್ ತಳವಾರ, ದೇವೇಂದ್ರ ಕೆ ಚಿಗರಹಳ್ಳಿ, ರಾಜೇಂದ್ರ ರಾಜವಾಳ, ಚಂದ್ರಶೇಖರ್ ಜಮಾದಾರ ವಕೀಲರು, ಶರಣು ಕೋಳಿ, ರಾಜಶೇಖರ ಸೊಪ್ಪಿ  ಹಂಚಿನಾಳ,  ಚಂದ್ರು ಗಂವ್ಹಾರ, ಶರಣು ಎಸ್ ಬಿದನೂರು, ಮಡಿವಾಳಪ್ಪ ಹಣಮಂತಗೊಳ, ಸಾಬಣ್ಣ ಜಾಲಗಾರ, ಕರಣ ಬಿರಾದಾರ್, ಇತರರು ಸೇರಿದಂತೆ  ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here