ಸುರೇಶ ಅಂಗಡಿ ನಿಧನಕ್ಕೆ ವೀರಶೈವ ಮಹಾಸಭಾದಿಂದ ಶ್ರದ್ಧಾಂಜಲಿ

0
92

ಕಲಬುರಗಿ: ಭಾರತ ಸರ್ಕಾರದ ರೈಲ್ವೆ ಮಂತ್ರಾಲಯದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಭಾವಪೂರ್ಣ ಶ್ರದ್ಧಾಂಜಲಿ, ಅಖಿಲಭಾರತ ವೀರಶೈವ ಮಹಾಸಭಾ ವತಿಯಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು,

ಈ ಸಂದರ್ಭದಲ್ಲಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಗಳಾದ ಡಾ. ಶರಣ.ಬಿ .ಪಾಟೀಲ ಅವರು ಮಾತನಾಡಿ ಸುರೇಶ್ ಅಂಗಡಿಯವರು ಕರ್ನಾಟಕದ ಪ್ರತಿನಿಧಿಯಾಗಿ ಪ್ರತಿಷ್ಠಿತ ಖಾತೆ ಆಗಿರತಕ್ಕಂತ  ರೈಲ್ವೇ ಖಾತೆಯ ರಾಜ್ಯ ಸಚಿವರಾಗಿದ್ದು ಕರ್ನಾಟಕದ ಹೆಮ್ಮೆ ಎಂಬಂತಾಗಿತ್ತು ಕೊರೊನಾ ಮಹಾಮಾರಿಗೆ ಸುರೇಶ್ ಅಂಗಡಿಯವರು ಬಲಿಯಾಗಿದ್ದು ವೀರಶೈವ ಸಮಾಜಕ್ಕೆ ಮತ್ತು ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು..

Contact Your\'s Advertisement; 9902492681

ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಸರ್ವ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಶರಣಬಸವೇಶ್ವರ ರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಅಧ್ಯಕ್ಷ ಡಾ. ಶರಣ್ ಕುಮಾರ್ ಮೋದಿ, ಉಪಾಧ್ಯಕ್ಷೆ ಗೌರಿ ಚಿತಕೋಟಿ, ಯುವ ಘಟಕದ ನಗರ ಅಧ್ಯಕ್ಷ ಉದಯ ಪಾಟೀಲ್, ಖಜಾಂಚಿ ಚೆನ್ನಪ್ಪ ದಿಗ್ಗಾವಿ, ಕಾರ್ಯದರ್ಶಿ ಅಶೋಕ್ ಪಟ್ಟಣಶೆಟ್ಟಿ, ಕಾರ್ಯಕಾರಣಿ ಸದಸ್ಯರಾದ ಧರ್ಮಪ್ರಕಾಶ್ ಪಾಟೀಲ್, ಮಂಜುನಾಥ್ ಅಂಕಲಗಿ, ವಿರುಪಾಕ್ಷಯ್ಯ ಮಠಪತಿ, ಭೀಮಶಂಕರ್ ಮಿಟೇಕರ್, ಬಸವರಾಜ ಪಾಟೀಲ್ ವರ್ಚನಹಳ್ಳಿ, ವಿಜಯ್ ಕುಮಾರ್ ಹುಲಿ ಅಣವೀರ ಪಾಟೀಲ್ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here