ಲೋಕ ಜನಶಕ್ತಿ ಪಕ್ಷದಿಂದ ರಾಮವಿಲಾಸ್ ಪಾಸ್ವನ್ಗೆ ಶ್ರದ್ಧಾಂಜಲಿ

0
14

ಸುರಪುರ : ಲೋಕ ಜನಶಕ್ತಿ ಪಕ್ಷ ಕಟ್ಟಿ ದೇಶದಲ್ಲಿನ ದೀನ ದಲಿತರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿ ಎನ್‌ಡಿಎ ಸರಕಾರ ರಚನೆಯಲ್ಲಿ ತನ್ನದೆ ಆದ ಪಾತ್ರವಹಿಸಿದ್ದ ರಾಮವಿಲಾಸ್ ಪಾಸ್ವನ್ ಅವರ ನಿಧನದಿಂದ ದೇಶಕ್ಕೆ ದೊಡ್ಡ ನಷ್ಟವುಂಟಾಗಿದೆ ಎಂದು ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ಮಾತನಾಡಿದರು.

ನಗರದ ಲೋಕ ಜನಶಕ್ತಿ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಪಾಸ್ವನ್‌ಜಿ ಅವರು ದೀನ ದಲಿತರ ಶಕ್ತಿಯಾಗಿದ್ದರು ಅವರನ್ನು ಕಳೆದುಕೊಂಡು ಲೋಕ ಜನಶಕ್ತಿ ಪಕ್ಷ ತನ್ನ ಶಕ್ತಿ ಕಳೆದುಕೊಂಡಂತಾಗಿದೆ ಎಂದು ನೋವು ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಭೆಯ ಆರಂಭದಲ್ಲಿ ರಾಂವಿಲಾಸ್ ಪಾಸ್ವನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಸಂತಾಪ ಸೂಚಿಸಿದರು.ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾನಪ್ಪ ಮೇಲಿನಮನಿ ತಾಲೂಕು ಅಧ್ಯಕ್ಷ ಅಯ್ಯಾಳಪ್ಪ ಹೊನಕೇರಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here