8 ರಂದು ಬಿಜೆಪಿ ಜಿಲ್ಲಾ ಘಟಕದಿಂದ ನೂತನ ಸಂಸದ, ಶಾಸಕ ಜಾಧವ ದ್ವಯರಿಗೆ ಅಭಿನಂದನ ಸಮಾರಂಭ

0
141

ಕಲಬುರಗಿ: ನಗರದ ಪಬ್ಲಿಕ್ ಗಾರ್ಡನ್ ನ ವೀರಶೈವ ಕಲ್ಯಾಣ ಮಂಟಪದಲ್ಲಿ 8 ರಂದು ಬೆಳಿಗ್ಗೆ 11:00 ಗಂಟೆಗೆ ನೂತನ ಸಂಸತ್ ಸದಸ್ಯರಾಗಿ ಆಯ್ಕೆಯಾದ ಡಾ. ಉಮೇಶ್ ಜಾಧವ್ ಮತ್ತು ಬೀದರ್ ಕ್ಷೇತ್ರದ ಸಂಸತ್ ಸದಸ್ಯರು ಭಗವಂತ ಖೂಬಾ ಹಾಗೂ ಚಿಂಚೋಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಅವಿನಾಶ್ ಜಾಧವ್ ಅಭಿನಂದನ ಕಾರ್ಯಕ್ರಮ ಹಮ್ಮಿಕೊಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಗರ ಜಿಲ್ಲಾಧ್ಯಕ್ಷ , ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಗ್ರಾಮೀಣ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ತಿಳಿಸಿದ್ದಾರೆ.

ಗೆಲುವಿಗೆ ಕಾರಣರಾಗಿರುವ ಬಿಜೆಪಿಯ ಶಾಸಕರು,ಮಾಜಿ ಶಾಸಕರು, ಮಾಜಿ ಮಂತ್ರಿಗಳು, ರಾಜ್ಯದ ಹಾಗೂ ಜಿಲ್ಲೆಯ ಪದಾಧಿಕಾರಿ, ರಾಜ್ಯದ ಮತ್ತು ಜಿಲ್ಲೆಯ ಮೋರ್ಚಾದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶಕ್ತಿಕೇಂದದ ಪ್ರಮುಖಂಡರು, ಜಿಲ್ಲಾ, ತಾಲೂಕ, ಹಾಗೂ ಗ್ರಾ.ಪಂ ಎಲ್ಲಾ ಸದಸ್ಯರು ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಜೆಪಿ ನಗರ ಜಿಲ್ಲಾಧ್ಯಕ್ಷ ಬಿ.ಜಿ ಪಾಟೀಲ್ ಹಾಗೂ ಗ್ರಾಮೀಣ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ತಮ್ಮ ಪ್ರಕಟಣೆಯಲ್ಲಿ ಅವರು ಕೋರಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here