ಹೋರಾಟಗಾರರಾದ ಮಾನ್ಪಡೆ ಅವರಿಗೆ ಶ್ರದ್ಧಾಂಜಲಿ

0
31

ಆಳಂದ: ರೈತಾಪಿ ವರ್ಗದ,ಕೃಷಿ ಕೂಲಿ ಕಾರ್ಮಿಕರ ಧ್ವನಿಯಾಗಿದ್ದ ಮಾರುತಿ ಮಾನ್ಪಡೆ ಯವರಿಗೆ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಕಟ್ಟದ ಕಾರ್ಮಿಕ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕ.ಕಾ.ಸಂಘದ ಅಧ್ಯಕ್ಷ ಯಲ್ಲಪ್ಪ ಮಾಂಗ ಮಾನ್ಪಡೆ ಯವರ ಅಗಲಿಕೆಯಿಂದ ಕಾರ್ಮಿಕರು ,ರೈತರು, ಕೂಲಿ ಕಾರ್ಮಿಕರಿಗೆ ತುಂಬಲಾರದ ನಷ್ಟವಾಗಿದೆ, ಮಹಾನ್ ಹೋರಾಟಗಾರನ ಆತ್ಮಕ್ಕೆ ಚಿರಶಾಂತಿ ದೊರೆಯಲಿ,ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬಸವರಾಜ ಅರ್ಜುಣಗಿ,ಶ್ರೀಮಂತ ತಳವಾರ,ಜಗನ್ನಾಥ್ ಗುಂಡಗುರ್ತಿ,ದಸ್ತಗಿರ ಲಧಾಪ್,ಹನಮಂತ ಫಿರೋಜ್, ಧರ್ಮಣ್ಣ ಮಂಟಗಿ,ಅನಿಲ ಕಟ್ಟಿಮನಿ,ಸುಲೆಮಾನ್,ಮಲ್ಲಿಕಾರ್ಜುನ,ರಾಮು ಸಾಳುಂಕೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here