ಲೋಕ ಜನಶಕ್ತಿ ಪಕ್ಷದಿಂದ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಮನವಿ

0
26

ಸುರಪುರ: ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡಕ್ಕೆ ೭.೫ಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ಸರಕಾರಕ್ಕೆ ಒತ್ತಾಯಿಸಿದರು.

ಈ ಕುರಿತು ಸುರಪುರ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ,ರಾಜ್ಯದಲ್ಲಿನ ಪರಿಶಿಷ್ಟ ಪಂಗಡದಲ್ಲಿ ಸುಮಾರು ೧ ಕೋಟಿಯಷ್ಟು ಜನಸಂಖ್ಯೆ ಇದೆ,ಆದರೆ ಈ ಸಮುದಾಯಕ್ಕೆ ಕೇವಲ ಪ್ರತಿಶತ ೩ ರಷ್ಟು ಮಾತ್ರ ಮೀಸಲಾತಿ ನೀಡುವ ಮೂಲಕ ಅಭೀವೃಧ್ಧಿಯನ್ನು ಕಸಿಯಲಾಗಿದೆ. ಆದ್ದರಿಂದ ಈ ಮೀಸಲಾತಿ ಪ್ರಮಾಣವನ್ನು ೭.೫ಕ್ಕೆ ಹೆಚ್ಚಿಸಬೇಕು ಅಂದಾಗ ಪರಿಶಿಷ್ಟ ಪಂಗಡ ಅಭಿವೃಧ್ಧಿ ಹೊಂದಲು ಸಾಧ್ಯವಿದೆ.ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿದರು.

Contact Your\'s Advertisement; 9902492681

ನಂತರ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದುರ್ಗಪ್ಪ ಬಡಿಗೇರ ತಾಲೂಕು ಅಧ್ಯಕ್ಷ ಅಯ್ಯಾಳಪ್ಪ ವನಕೇರಿ ವಕೀಲ ಬಲಭೀಮ ನಾಯಕ ದೇವಾಪುರ ಕನಕಾಚಲ ಜಾಗಿರದಾರ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here