ಆಕ್ರಮ ನಾಡ ಪಿಸ್ತೊಲ್ ಇರಿಸಿಕೊಂಡ ಇಬ್ಬರು ಆರೋಪಿಗಳ ಬಂಧನ

0
1075

ಕಲಬುರಗಿ: ನಗರದ ಎಂಎಸ್​ಕೆ ಮಿಲ್​ ಕಣ್ಣಿ ಬಜಾರ್​ ಹತ್ತಿರದ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳಿಂದ ಆಕ್ರಮ ನಾಡಪಿಸ್ತೂಲ್ ಹಾಗೂ ಮೂರು ಜಿವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡು ಘಟನೆ ನಡೆದಿದೆ.

Contact Your\'s Advertisement; 9902492681

ಹಸನಸಾಬ್ ಹತ್ತರಕಿ (33) ಹಾಗೂ ಲಕ್ಷ್ಮಿಕಾಂತ ಶೇಖಜಿ (40) ಬಂಧಿತ ಆರೋಪಿಗಳು, ಇಬ್ಬರು ಅಫಜಲಪುರ ತಾಲೂಕಿನ ಕೋಗನೂರು ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದ್ದು, ಕಣ್ಣಿ ಮಾರ್ಕೆಟ್ ಹತ್ತಿರ ಇಬ್ಬರು ಬಂಧಿತ ಆರೋಪಿಗಳು ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು, ಅಶೋಕ ನಗರ ಪೊಲೀಸ್ ಠಙಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿತರಿಂದ ಒಂದು ನಾಡ ಪಿಸ್ತೂಲ್, ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ತಿಳಿಸಿದ್ದಾರೆ.

ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here