ನಳಿನಕುಮಾರ ಕಟೀಲ ಹೇಳಿಕೆಗೆ ಕಿರಣಕುಮಾರ ಚವ್ಹಾಣ ಆಕ್ರೋಶ

0
229

ಶಹಾಬಾದ:ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಬಿಜೆಪಿ ಸರಕಾರ ಬದ್ಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಅವರು ಹೇಳಿಕೆ ನೀಡಿರುವುದಕ್ಕೆ ಬಂಜಾರಾ ಸಮಾಜದ ಯುವ ಮುಖಂಡ ಕಿರಣಕುಮಾರ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿರಾದಲ್ಲಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಾದಿಗ ಸಮಾಜದ ಮತಗಳನ್ನು ಸೆಳೆಯಲು ಈ ರೀತಿಯ ಹೇಳಿಕೆ ನೀಡಿರುವುದು ನ್ಯಾಯಸಮ್ಮತವಲ್ಲ.ಈಗಾಗಲೇ ಸದಾಶಿವ ಆಯೋಗ ಜಾರಿಗೊಳಿಸಬಾರದೆಂದು ಇತರ ಸಮಾಜದವರು ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಆದರೆ ಮತಗಳನ್ನು ಪಡೆಯಲು ಈ ರೀತಿಯ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ.ಪಕ್ಷದ ಒಬ್ಬ ಜವಾಬ್ದಾರಿ ವ್ಯಕ್ತಿಯಾಗಿ ಈ ರೀತಿ ಹೇಳಿಕೆ ನೀಡಿ ಇತರ ಸಮಾಜದ ಭಾವನೆಗೆ ದಕ್ಕೆ ತರುವಂತ ಕೆಲಸ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯಥರ್ಿ ಗೆಲ್ಲಲ್ಲು ಬಂಜಾರಾ ಸಮಾಜದ ಮತಗಳು ಸೆಳೆಯಲು ಏನೆಲ್ಲಾ ಭರವಸೆಗಳನ್ನು ನೀಡಿದ ಬಿಜೆಪಿಗರು ಈಗ ಮರೆತು ಹೋದರಾ? ಅಲ್ಲದೇ ಈ ರೀತಿಯ ಹೇಳಿಕೆ ನೀಡಿದರೂ ಸಂಸದ ಡಾ.ಉಮೇಶ ಜಾಧವ ಹಾಗೂ ಬಂಜಾರಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಸುಮ್ಮನಾಗಿರುವುದು ಏತಕ್ಕೆ.ಕೂಡಲೇ ಈ ಹೇಳಿಕೆ ಬಗ್ಗೆ ಮಾತನಾಡಿ.ಇಲ್ಲದಿದ್ದರೇ ಬಂಜಾರಾ ಸಮಾಜದವರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here