ಆಳಂದ: 16ಕ್ಕೆ ಡಾ. ಅಂಬೇಡ್ಕರ್ ಮೂರ್ತಿ ಅನಾವರಣ

0
40

ಕಲಬುರಗಿ: ಆಳಂದ ತಾಲೂಕಿನ ಚಿಂಚಂಸೂರ ಗ್ರಾಮದಲ್ಲಿ 16ರಂದು ಬೆಳಿಗ್ಗೆ 11ಕ್ಕೆ ಡಾ ಅಂಬೇಡ್ಕರ್ ಮೂರ್ತಿ ಅರಾವಣ ಕಾರ್ಯಕ್ರಮ ಜರುಗಲಿದೆ ಎಂದು ಡಾ. ಬಿ.ಆರ್ ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷರಾದ ಶಿವಶರಣಪ್ಪ ಸಜ್ಜನ್ ತಿಳಿಸಿದ್ದಾರೆ.

ಬಸವಕಲ್ಯಾಣ ತಾಲೂಕಿನ ಹತ್ಯಾಳ ಭಂತೆ ದಮ್ಮನಾಗ, ಮೈಸೂರು ಉರಿಲಿಂಗ ಪೆದ್ದಿಮಠದ ಡಾ. ಜ್ಞಾನ ಪ್ರಕಾಶ ಸ್ವಾಮೀಜಿ, ಬಿಕ್ಕುಣಿ ಆರ್ ಐಜಿ. ಸುಮನ್, ಶಾಹಾಬಜಾರ ಶ್ರೀ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಬಸವ ಕಬೀರಾನಂದ ಸ್ವಾಮೀಜಿ,  ಚಿಂಚನಸೂರ ಸಿದ್ದಮಲ್ಲ ಶಿವಾಚಾರ್ಯರು, ಅಂಬೇಜೋಗ ಶ್ರೀ ಗಂಗಾಧರ ಹಿರೇಮಠ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

Contact Your\'s Advertisement; 9902492681

0ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಬಸವರಾಜ ಬಸವರಾಜ ಮತ್ತಿಮೂಡ, ಡಾ. ವಿಠ್ಠಲ ದೊಡ್ಡಮನಿ, ಡಾ. ಡಿ.ಜಿ ಸಾಗರ, ವಿಜಯಕುಮಾರ ಜಿ. ರಾಮಕೃಷ್ಣ, ಶೋಭಾ ಶಿರಸಗಿ, ಮಲ್ಲಿನಾಥ ಪಾಟೀಲ್ ಸೋಂತ, ನಿಲಕಂಠರಾವ ಮೂಲಗೆ, ಖ್ಯಾಂತ ಚಿಂತಕ ವಿಠ್ಠಲ ವಗ್ಗನ್, ಡಾ.ಅನೀಲ ಟೇಂಗಳಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ ಎಂದು ಡಾ. ಬಿ.ಆರ್ ಅಂಬೇಡ್ಕರ್ ತರುಣ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here