ಚಿತ್ತಾಪುರ: ಮಾಜಿ ಪ್ರಧಾನ ಮಂತ್ರಿಗಳಾದ ದಿ.ರಾಜೀವ್ ಗಾಂಧೀಯವರ ಪುಣ್ಯ ದಿನದ ಅಂಗವಾಗಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪುಣ್ಯಸ್ಮರಣೆ ಮಾಡಲಾಯಿತು.
ಆಧುನಿಕ ಭಾರದ ದೂರ ದೃಷ್ಟಿ ಹೊಂದಿದ್ದ ಶ್ರೀ ರಾಜೀವ್ ಗಾಂಧಿಯವರು ಅತ್ಯುನ್ನತ ತಂತ್ರಜ್ಞಾನದ ಹಾಗೂ ಭಾರತವನ್ನು ಏಕತೆಯ ದೇಶವನ್ನಾಗಿ ಮಾಡಿ 21ನೇ ಶತಮಾನದಲ್ಲಿ ಪ್ರಗತಿ ಪಥದತ್ತ ಕೊಂಡ್ಯೊಯುವ ಗುರಿ ಹೊಂದಿದ್ದರು ಎಂದು ಪುರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಳಗಿ ಹೇಳಿದರು.
ಈ ಸಂಧರ್ಭದಲ್ಲಿ ಕಿಸಾನ ಘಟಕ ಅಧ್ಯಕ್ಷರಾದ ನಾಗರೆಡ್ಡಿ ಗೋಪಸೆನ, ಯುವ ಅಧ್ಯಕ್ಷರಾದ ಸಂಜಯ ಬುಳಕರ, ಪ್ರಮುಖರಾದ ವಿನ್ನುಕುಮಾರ ಜೆಡಿ, ಬಸವರಾಜ್ ಮೂಡಬುಳಕರ, ಮಾರುತಿ ಅಳ್ಳೊಳ್ಳಿ ಇದ್ದರು.