ಬಳಕೆಯಾಗದ ರಬ್ಬನಳ್ಳಿ ಬಸ್ ನಿಲ್ದಾಣ

0
41

ಶಹಾಪುರ: ತಾಲ್ಲೂಕಿನ ರಬ್ಬನಳ್ಳಿ ಬಸ್ ನಿಲ್ದಾಣ ಬಳಕೆಯಾಗದೆ ಗಬ್ಬೆದ್ದು ನಾರುತ್ತಿದ್ದು ಪ್ರಯಾಣಿಕರಿಗೆ ಇದು ಉಪಯೋಗಕ್ಕೆ ಬಾರದಂತಾಗಿದೆ ಎಂದು ರೈತಸಂಘದ ಮುಖಂಡರಾದ ಕಾಂತು ಪಾಟೀಲ್ ಆರೋಪಿಸಿದ್ದಾರೆ.

ಇಲ್ಲಿ ರಾತ್ರಿಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಡುತ್ತದೆ ಇಲ್ಲಿ ಯಾರೂ ಹೇಳೋರಿಲ್ಲ ಕೇಳೋರಿಲ್ಲ ಬಸ್ ನಿಲ್ದಾಣದ ಸುತ್ತಲೂ ಜಾಲಿ ಮುಳ್ಳು ಕಂಟಿಗಳು ಬೆಳೆದಿರುವುದರಿಂದ ಇದು ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ.

Contact Your\'s Advertisement; 9902492681

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಬಸ್ ನಿಲ್ದಾಣದ ಸುತ್ತಲೂ ಸ್ವಚ್ಛತೆ ಕಾಪಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here