ಗುಲ್ಬರ್ಗ ವಿವಿಯ 38ನೇ ಘಟಿಕೋತ್ಸವ: ಉನ್ನತ ಶಿಕ್ಷಣದ ಭರವಸೆ ಸಾಕಾರಗೊಳಿಸಿ ಭವಿಷ್ಯ ರೂಪಿಸಿ: ಎಸ್. ಮಾಧೇಶ್ವರನ್ ಸಲಹೆ

0
140

ಕಲಬುರಗಿ: ಹಿಂದುಳಿದ ಈ ಭಾಗದಲ್ಲಿ ಉನ್ನತ ಮತ್ತು ಗುಣಮಟ್ಟದ ಶಿಕ್ಷಣವನ್ನು ಗುಲ್ಬರ್ಗ ವಿವಿ ನೀಡುತ್ತ ಬಂದಿದೆ ಎಂದು ರಾಜ್ಯಸರ್ಕಾರದ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ ನಾರಾಯಣ ತಿಳಿಸಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಿವಿಯ 38ನೇ ಘಟಿಕೋತ್ಸವದಲ್ಲಿ ಆನ್ ಲೈನ್ ಮೂಲಕ ಭಾಗವಹಿಸಿ ಮಾತನಾಡಿದ ಅವರು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಗಳು ನೆರವೇರಲಿ ಎಂದು ಶುಭ ಕೋರಿದರು.

Contact Your\'s Advertisement; 9902492681

ಆನ್ ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಸ್. ಮಾಧೇಶ್ವರನ್, ಇಂದಿನ ವಿದ್ಯಾರ್ಥಿಗಳು ನಿರ್ಭಂದಿತ ಶಿಕ್ಷಣ ಮಾದರಿಯೊಂದಿಗೆ ತೃಪ್ತರಾಗಿಲ್ಲ. ವಿಭಾಗಗಳನ್ನು ಬೆರೆಸಲು ಮತ್ತು ಹೊಂದಿಸಲು ಬಯಸುತ್ತಿದ್ದು, ಇದನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಹೆಚ್ಚಾಗಿ ವಿವಿ ಮತ್ತು ನಿಯಂತ್ರಕ ಸಂಸ್ಥೆಗಳ ಮೇಲಿದೆ ಎಂದು ತಿಳಿಸಿದರು.

ಭಾರತದ ಇ- ಲರ್ನಿಂಗ್ ಮಾರುಕಟ್ಟೆ ೨೦೨೧ರ ವೇಳೆಗೆ ೯.೫ ಮಿಲಿಯನ್ ಬಳಕೆದಾರರಿಗೆ ವಿಸ್ತರಿಸುವ ಸಾಧ್ಯತೆಯಿದೆ. ಇ- ಕೋರ್ಸ್ ಗಳು ವಿದ್ಯಾರ್ಥಿಗಳಿಗೆ ಜೀವಿತಾವಧಿಯ ಕಲಿಕೆಯನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ ಮತ್ತು ಮರುಕೌಶಲ್ಯ ಮತ್ತು ಕೌಶಲ್ಯಾಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದರು.

ಇಂದಿನ ಕಾಲಘಟ್ಟದಲ್ಲಿ ಶಿಕ್ಷಿತ ಮಾನವ ಶಕ್ತಿಯ ಬೇಡಿಕೆ ಮತ್ತು ಪೂರೈಕೆಯ ಅಂಶದೆಡೆ ಅಮತೋಲನ ಸಾಧಿಸುವ ತುರ್ತು ನೀತಿಯ ಅವಶ್ಯಕತೆ ಇದೆ ಎಂದು ವಿವರಿಸಿದರು.

ಭಾರತದಲ್ಲಿ ಉನ್ನತ ಶಿಕ್ಷಣ ತನ್ನ ಗುರಿಯತ್ತ ಸಾಗುತ್ತಿದ್ದು, ೨೦೨೨ರ ವೇಳೆಗೆ GERನ ಪ್ರಮಾಣವನ್ನು ಪ್ರತಿಶತ ೩೨ಕ್ಕೆ ಏರಿಸುವ ಗುರಿ ಹೊಂದಿದೆ ಎಂದು ಹೇಳಿದರು.

ಭಾರತವು ಜಗತ್ತಿನಲ್ಲಿಯೇ ಬೃಹತ್ ಗಾತ್ರದ ಶೈಕ್ಷಣಿಕ ವ್ಯವಸ್ಥೆಯನ್ನು ಹೊಂದಿದಾಗ್ಯೂ ಕೂಡ ಅದರ ಸತ್ದ ಕೊಡುಗೆ ಕನಿಷ್ಟವಾಗಿದೆ. ಉನ್ನತ ಶಿಕ್ಷಧ ಭರವಸೆಯನ್ನು ಸಾಕಾರಗೊಳಿಸಿ ಭವಿಷ್ಯ ರೂಪಿಸುವುದು ಅಗತ್ಯವಿದೆ ಎಂದು ತಿಳಿಸಿದರು.

ಕುಲಪತಿ ಪ್ರೊ. ಚಂದ್ರಕಾಂತ ಎಂ. ಯಾತನೂರ ಸ್ವಾಗತಿಸಿದರು. ಕುಲ ಸಚಿವ ಪ್ರೊ. ಸಿ. ಸೋಮಶೇಖರ, ಮೌಲ್ಯಮಾಪನ ಕುಲಸಚಿವ. ಸಂಜೀವಕುಮಾರ ಕೆ.ಎಂ., ಸಿಂಡಿಕೇಟ್, ವಿದ್ಯಾವಿಷಯಕ ಸದಸ್ಯರು, ಎಲ್ಲ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿದ್ದರು.
ಇದೇವೇಳೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ, ಪಿಎಚ್.ಡಿ. ಪದವಿ ಪ್ರದಾನ ಮಾಡಲಾಯಿತು.

ಗೌರವ ಡಾಕ್ಟರೇಟ್: ಮಂತ್ರಾಲಯದ ಸುಭುದೇಂದ್ರ ತೀರ್ಥರಿಗೆ ಅವರ ಸಾಮಾಜಿಕ, ಧಾರ್ಮಿಕ ಸೇವೆ ಪರಿಗಣಿಸಿ ಈ ಬಾರಿ ಗುಲ್ಬರ್ಗ ವಿವಿ ವತಿಯಿಂದ ಪೂಜ್ಯರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here