ಸುರಪುರ ನಗರದಲ್ಲಿ ಭರದಿಂದ ಸಾಗಿದ ’ಯಾರ್ ಮಗಾ’ ಸಿನೆಮಾದ ಚಿತ್ರೀಕರಣ

0
27

ಸುರಪುರ: ನಮ್ಮ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಮತ್ತು ನಾಯಕ ನಟರಿಗೆ ಅವಕಾಶಗಳು ತುಂಬಾ ಕಡಿಮೆ ಇಂತಹ ಸಂದರ್ಭದಲ್ಲಿ ಬೆಂಗಳೂರಲ್ಲಿಯೆ ನೆಲೆಸಿ ಇಂದು ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿ ಯಾರ್ ಮಗಾ ಎಂಬ ಹೆಸರಿನ ಸಿನೆಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಡುತ್ತಿರುವ ಪಡಕೋಟೆ ಬ್ಯಾನರ್ ಹಾಗು ನಟ ಶಿವಾಜಿ ಪಡಕೋಟೆಯವರಿಗೆ ಒಳ್ಳೆಯದಾಗಲೆಂದು ಹಾರೈಸುವುದಾಗಿ ಬಿಜೆಪಿ ಪಕ್ಷದ ಮುಖಂಡ ಬಲಭೀಮ ನಾಯಕ ಬೈರಿಮಡ್ಡಿ ಮಾತನಾಡಿದರು.

ನಗರದ ಯಲ್ಲಪ್ಪ ಬಾವಿ ಬಳಿಯಲ್ಲಿ ನಡೆಸಲಾಗುತ್ತಿರುವ ಯಾರ್ ಮಗಾ ಸಿನೆಮಾದ ಚಿತ್ರೀಕರಣಕ್ಕೆ ಕ್ಯಾಮರಾ ಬಟನ್ ಒತ್ತುವ ಮೂಲಕ ಚಾಲನೆ ನೀಡಿ ಮಾತನಾಡಿ,ಆದಷ್ಟು ಬೇಗ ಸಿನೆಮಾ ತೆರೆಕಂಡು ಎಲ್ಲರನ್ನು ರಂಜಿಸುವ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಮೂಲಕ ಯುವಕರ ಬದಲಾವನೆಗೆ ಮುನ್ನುಡಿಯಾಗಲಿ ಎಂದು ಹಾರೈಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಕರವೇ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡಕೋಟೆ ಮಾತನಾಡಿ,ಇಂದು ನಮ್ಮ ಮನೆಯ ಮಗ ಶಿವಾಜಿ ಪಡಕೋಟೆ ಸಿನೆಮಾ ರಂಗದ ಮೂಲಕ ನಮ್ಮ ಕಲ್ಯಾಣ ಕರ್ನಾಟಕ ಜೊತೆಗೆ ವಿಶೇಷವಾಗಿ ಸಗರ ನಾಡಿನ ಹೆಸರನ್ನು ಬೆಂಗಳೂರು ಮಟ್ಟದಲ್ಲಿ ತನ್ನ ನಟನೆಯ ಮೂಲಕ ಎತ್ತಿ ಹಿಡಿಯಲು ಮುಂದಾಗಿದ್ದಾನೆ,ಅವನಿಗೆ ಎಲ್ಲರು ಚಿತ್ರ ವೀಕ್ಷಿಸುವ ಮೂಲಕ ಹರಸಿ ಬೆಳಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಶ್ರೀಗುರು ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ ನಟ ಶಿವಾಜಿ ಪಡಕೋಟೆ ಬೆಂಕಿ ದೊರೆ ಸೇರಿದಂತೆ ಯಾರ್ ಮಗಾ ಚಿತ್ರ ತಂಡ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here