ಸಾಹಿತ್ಯ, ಸಂಶೋಧನಾ ಕ್ಷೇತ್ರಕ್ಕೆ ಡಿ.ಎನ್.ಅಕ್ಕಿ ಕೊಡುಗೆ ಅಪಾರ: ಡಾ.ಅಬ್ದುಲ್ ಕರೀಂ ಕನ್ಯಾಕೋಳೂರ

0
45

ಶಹಾಪುರ: ಸಗರನಾಡಿನ ಅಕ್ಷರ ಲೋಕದ ನಕ್ಷತ್ರ ಹಾಗೂ ಹಿರಿಯ ಸಾಹಿತಿ, ಡಿ.ಎನ್.ಅಕ್ಕಿ ಅವರ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಕೊಡುಗೆ ಅಪಾರವಾದದ್ದು ಎಂದು ಹಿರಿಯ ಸಾಹಿತಿ ಹಾಗೂ ಕನ್ನಡ ಪಂಡಿತರಾದ ಡಾ.ಅಬ್ದುಲ್ ಕರೀಂ ಕನ್ಯಾಕೋಳೂರ ಹೇಳಿದರು.

ಗೋಗಿ ಗ್ರಾಮದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಿ.ಎನ್.ಅಕ್ಕಿ ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಹಿರಿಯ ಸಾಹಿತಿಗಳಾದ ಡಿ.ಎನ್. ಅಕ್ಕಿಯವರು ಹಲವಾರು ಯುವ ಬರಹಗಾರರಿಗೆ ಸ್ಫೂರ್ತಿಯಾಗಿದ್ದಾರೆ ಜತೆಗೆ ಸಲಹೆ ನೀಡಿ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

ಗೋಗಿ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲನಗೌಡ ಪೊಲೀಸ್ ಪಾಟೀಲ ಮಾತನಾಡಿ ಸರಳ ಸಜ್ಜನಿಕೆಗೆ ಹೆಸರಾದ ಡಿ.ಎನ್. ಅಕ್ಕಿ ಯವರೆಗೆ ಸಿಕ್ಕ ಗೌರವ ಇಡೀ ಯಾದಗಿರಿ ಜಿಲ್ಲೆಗೆ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇವರು ಹಲವಾರು ಸಂಶೋಧನಾ ಕೃತಿಗಳನ್ನು ಹೆಕ್ಕಿ ತಂದು ನಾಡಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ತಿಳಿಸಿದರು

ಈ ಸಮಾರಂಭದ ವೇದಿಕೆ ಮೇಲೆ ಗ್ರಾಮದ ಹಿರಿಯರಾದ ಮಾಣಿಕರೆಡ್ಡಿ ಶಿರಡ್ಡಿ,ಚಂದಪ್ಪ ತಾಯಮ್ಮಗೋಳ,ಚಂದ್ರಶೇಖರ್ ಧೊತ್ರೆ,ಭೀಮರಡ್ಡಿ ಮಲಾರ್,ಬಸವರಾಜಪ್ಪಗೌಡ ತಂಗಡಗಿ,ಮಾನ್ ಸಿಂಗ್ ಚವಾಣ್, ಭೀಮರೆಡ್ಡಿ ಪೊಲೀಸ್ ಪಾಟೀಲ್,ಚಂದಪ್ಪ ಸೀತನಿ,ವೆಂಕಟೇಶ್,ವೀರಣ್ಣ ಧೋತ್ರೆ,ಗೌಡಪ್ಪಗೌಡ ಪರಿವಾಣ ಹಾಗೂ ಇತರರು ಉಪಸ್ಥಿತರಿದ್ದರು.

ಹೊನ್ನಾರಡ್ಡಿ ಭೈರೆಡ್ಡಿ ಪ್ರಾಸ್ತವಿಕ ಮಾತನಾಡಿದರು,ಅಂಬರೀಷ್ ಪೂಜಾರಿ ಸ್ವಾಗತಿಸಿದರು,ಶರಣು ಬೈರೆಡ್ಡಿ,ನಿರೂಪಿಸಿದರು ಗುರುನಾಥ ಮಾನು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here