ಮರಾಠರು ಕನ್ನಡಿಗರೇ , ಕನ್ನಡ ವಿರೋಧಿಗಳಲ್ಲ: ರಮೇಶ ಪೂಜಾರಿ

0
39

ಕಲಬುರಗಿ: ಮರಾಠರು ಕನ್ನಡಿಗರೇ ಆಗಿದ್ದಾರೆ. ಅವರು ಎಂದಿಗೂ ಕನ್ನಡ ವಿರೋಧಿಗಳಲ್ಲ . ಆದರೆ, ಕೆಲವರು ಮರಾಠರನ್ನು ಕರ್ನಾಟಕದಿಂದ ಓಡಿಸಿ ಎಂಬ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾ ಕಾರ್ಯದ್ಯಕ್ಷರಾದ ರಮೇಶ ಪೂಜಾರಿ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು , ಬೆಳಗಾವಿಯ ಯಾವುದೋ ಮೂಲೆಯಲ್ಲಿ ಎಂಇಎಸ್ ನ ಪುಂಡರು ಮಾಡುವ ಚೇಷ್ಟೆಗೆ ಇಡೀ ಮರಾಠ ಸಮುದಾಯವನ್ನು ಕೇವಲವಾಗಿ ಕಾಣುವುದು ಯಾವ ನ್ಯಾಯ. ಅದಕ್ಕಾಗಿ ಕನ್ನಡಪರ ಸಂಘಟನೆಯವರು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಆಗಬಾರದು. ಮರಾಠರು ಕನ್ನಡಿಗರೇ ಆಗಿದ್ದಾರೆ ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು ಎಂದರು.

Contact Your\'s Advertisement; 9902492681

ಮರಾಠ ಅಭಿವೃದ್ಧಿ ನಿಗಮ ರಚಿಸಿದ್ದರಿಂದ ಕೆಲ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡ ಹೋರಾಟಗಾರ ವಾಟಾಳ ನಾಗರಾಜ ರವರು ಡಿ.5 ರಂದು ಕರ್ನಾಟಕ ಬಂದ ಗೆ ಕರೆ ನೀಡಲು ಮುಂದಾಗಿದ್ದಾರೆ. ಅವರು ಸಮಗ್ರ ಕರ್ನಾಟಕದ ಮರಾಠರು. ಅವರ ಮೇಲೆ ಏಕೆ ಕಳಂಕ ಹೊರಸುತ್ತಿದ್ದಾರೆ ಎಂಬುದು ಅವರಿಗೆ ತಿಳಿಯುತ್ತಿಲ್ಲ. ಮರಾಠ ಸಮಾಜವು ಕನ್ನಡ ನಾಡು ನುಡಿಯಲ್ಲಿ ಕನ್ನಡ ಮರಾಠರಾಗಿ ಈ ನೆಲದಲ್ಲಿ ವಂಶಪಾರಂಪರೆಯಾಗಿ ಅವರು ಬದುಕು ನಡೆಸುತ್ತಿದ್ದಾರೆ.

ಬೀದರದ ಅನುಭವ ಮಂಟಪದಿಂದ ಮೈಸೂರಿನ ಬನ್ನಿ ಮಂಟಪದವರೆಗೂ , ವಿಜಯನಗರದಿಂದ ಕಿತ್ತೂರು ನಾಡಿನವರೆಗೂ , ಬೆಳಗಾವಿಯಿಂದ ಬೆಂಗಳೂರಿನವರೆಗೂ , ಕೋಲಾರ ಚಿನ್ನದ ಗಣಿಯಿಂದ ಕಾರವರವರೆಗೂ , ಕರ್ನಾಟಕದ ವಿಸ್ತೃತ ಪ್ರದೇಶದಲ್ಲಿ ಮರಾಠರು ಶತಮಾನಗಳಿಂದ ವಾಸಿಸುತ್ತಿದ್ದಾರೆ. ಕನ್ನಡತನದಿಂದ ಬಾಳ್ವೆ ಮಾಡುತ್ತಿದ್ದಾರೆ ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಯಾವುದೇ ರೀತಿಯ ಬಂದ ಗೆ ಅವಕಾಶ ನೀಡಬಾರದು ಎಂದರು.

ಮಹಾರಾಷ್ಟ್ರದ ಗೃಹ ಸಚಿವ ಅಜಿತ ಪವಾರ ಹೇಳಿಕೆ ನೀಡಿರುವುದು ಖಂಡನೀಯ ನೆಲ, ಜಲ, ಭಾಷೆ ವಿಚಾರ ಬಂದರೆ ಮಹಾರಾಷ್ಟ್ರದವರಿಗೆ ಕರ್ನಾಟಕದ ಒಂದು ಇಂಚು ಜಾಗವನ್ನು ಕೂಡಾ ಅವರಿಗೆ ಬಿಡುವುದಿಲ್ಲ. ಬೆಳಗಾವಿ ನಿಪ್ಪಾಣಿ ಎಂದಿಗೂ ಕರ್ನಾಟಕದೇ ಆಗಿದೆ. ಅದನ್ನು ಉಳಿಸಿಕೊಳ್ಳಲು ಅವರು ಎಲ್ಲದಕ್ಕೂ ಸಿದ್ದರಿದ್ದಾರೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here