ಜನುಮ ದಿನ ಆಚರಿಸದೆ ಜನತೆಗೆ ನೆರವಾಗಿ: ರಾಜಾ ವೆಂಕಟಪ್ಪ ನಾಯಕ

0
92

ಸುರಪುರ: ಈಬಾರಿ ನನ್ನ ಜನುಮ ದಿನವನ್ನು ಯಾರೂ ವಿಜೃಂಭಣೆಯಿಂದ ಆಚರಿಸಬೇಡಿ,ಬದಲಾಗಿ ಕಷ್ಟದಲ್ಲಿನ ಜನರಿಗೆ ನೆರವಾಗುವಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ತಮ್ಮ ಅಭಿಮಾನಿಗಳು ಮತ್ತು ಮುಖಂಡರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರೋನಾ ವೈರಸ್‌ನ ಕುರಿತು ಜನರು ಜಾಗೃತಿ ವಹಿಸಬೇಕು ಮರಳಿ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಕಡ್ಡಾಯವಾಗಿ ಜನರು ಮಾಸ್ಕಗಳನ್ನು ಧರಸಬೇಕು ಹಾಗೂ ಪರಸ್ಪರ ಅಂತರ ಕಾಯ್ದುಕೊಂಡು ಸೊಂಕು ತಗುಲದಂತೆ ಜಾಗೃತಿವಹಿಸಬೇಕಾಗಿದೆ.

Contact Your\'s Advertisement; 9902492681

ಕೋವಿಡ್-೧೯ ವೈರಸ್ ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ ಬಹಳಷ್ಟುಜನ ತಮ್ಮ ಉದ್ಯೋಗಕಳೆದುಕೊಂಡಿದ್ದಾರೆ ಇಷ್ಟಲ್ಲದೆ ಈಬಾರಿ ವರುಣನ ಆರ್ಭಟದಿಂದಾಗಿ ರೈತರು ಬೆಳೆದ ಬೇಳಗಳು ಹಾನಿಯಾಗಿ ಅನ್ನದಾನತ ಕಷ್ಟ ಅನುಭವಿಸುತ್ತಿದ್ದಾನೆ ಕ್ಷೇತ್ರದ ಜನತೆ ಸಂಕಷ್ಟದಲ್ಲಿರುವುದಲ್ಲಿದ್ದಾರೆ ಅಲ್ಲದೆ ಮತ್ತೆ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಕಡ್ಡಾಯವಾಗಿ ಜನರು ಮಾಸ್ಕಗಳನ್ನು ಧರಸಬೇಕು ಹಾಗೂ ಪರಸ್ಪರ ಅಂತರ ಕಾಯ್ದುಕೊಂಡು ಸೊಂಕು ತಗುಲದಂತೆ ಜಾಗೃತಿವಹಿಸಬೇಕಾಗಿದೆ.

ಕಾರಣ ಈಬಾರಿ ನನ್ನ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳದೆ ಇರಲು ನಿರ್ಧರಿಸಿರುತ್ತೇನೆ ಕಾರಣ ಅಭಿಮಾನಿ ಹಾಗೂ ಕಾರ್ಯಕರ್ತರು ವಿಜ್ರಂಬಣೆಯಿಂದ ಆಚರಿಸದೆ ಕಷ್ಟದಲ್ಲಿರುವ ಜನತೆಗೆ ಸ್ಪಂದಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here