ಜಾನಪದ ಕಲಾವಿದೆ ಶರಣಮ್ಮಗೆ ಬಸರತ್ನ ರಾಷ್ಟ್ರೀಯ ಪ್ರಶಸ್ತಿ

0
114

ಕಲಬುರಗಿ: ವಿಜಯಪುರ ಜಿಲ್ಲೆಯ ಆಹೇರಿ ಗ್ರಾಮದ ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ, ಸಂಸ್ಕೃತಿ ವೇದಿಕೆಯ ೧೬ನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯ ಮಟ್ಟದ ವಚನ ವಿಜಯೋತ್ಸವ ಹಾಗೂ ೨೦೨೦ -೨೧ನೇ ಸಾಲಿನ ಬಸವರತ್ನ ರಾಷ್ಟ್ರೀಯ ಪ್ರಶಸ್ತಿಗೆ ಜಾನಪದ ಕಲೆಯನ್ನು ಉಳಿಸಿ ಬೆಳೆಸುತ್ತಿರುವುದನ್ನು ಪರಿಗಣಿಸಿ ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ಶ್ರೀಮತಿ ಶರಣಮ್ಮ ಪಿ. ಸಜ್ಜನ ಜಾನಪದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ ತೀಳಿಸಿದ್ದಾರೆ.

ಇವರು ಗ್ರಾಮದಲ್ಲಿ ಅಷ್ಟೆ ಅಲ್ಲದೇ ತಮ್ಮ ಕಲೆಯನ್ನು ಕನ್ನಡ ಅಭಿವೃದ್ಧೀ ಪ್ರಾಧಿಕಾರ ಬೆಂಗಳುರು, ಸಹಹೃದಯಿ ಸ್ನೇಹ ಬಳಗ ಕಲಬುರಗಿ, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಭಾರತ ಸರ್ಕಾರ ವಾರ್ತ ಮತ್ತು ಪ್ರಸಾರ ಇಲಾಖೆ ಕ್ಷೇತ್ರ ಪ್ರಚಾರ ನಿರ್ದೆಶನಾಲಯ ಕರ್ನಾಟಕ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಚಿತ್ತಾಪೂರ, ರಾಷ್ಟ್ರೀಯ ಸಂತಕವಿ ಕಬೀರದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳುರು, ಕನ್ನಡ ಜಾನಪದ ಪರಿಷತ್ತು ಕಮಲಾಪುರ ಘಟಕ ಕಲಬುರಗಿ, ವಿಶ್ವಜ್ಯೋತಿ ಪ್ರತಿಷ್ಠಾನ ಕಲಬುರಗಿ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಮುಂತಾದ ಕಡೆ ಭಾಗವಹಿಸಿ ತಮ್ಮ ಜಾನಪದ ಕಲೆಯನ್ನು ಪ್ರಸ್ತೂತ ಪಡಿಸಿದ್ದಾರೆ.

Contact Your\'s Advertisement; 9902492681

ಜಾನಪದ ಕಲೆ ಗ್ರಾಮೀಣ ಭಾಗದಲ್ಲಿ ಅಷ್ಟೇ ಸಿಮೀತವಾಗಬಾರದು ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಹಂಚಬೇಕು ಎಂದು ಸಾಂಸ್ಕೃತಿ ಕಾರ್ಯಕ್ರದಲ್ಲಿ ಭಾಗವಹಿಸಿ ತಮ್ಮ ಕಲೆಯನ್ನು ಸಮಾಜಕ್ಕೆ ಕೋಡುಗೆಯಾಗಿ ನೀಡುತ್ತಲ್ಲಿದ್ದಾರೆ.

ಉತ್ಸಾಹಿ ಜಾನಪದ ಕಲಾವಿದೆ ಶರಣಮ್ಮ ಅವರು ಚಿಕ್ಕ ವಯಸ್ಸಿನಿಂದ ಜಾನಪದ ಹಾಡುಗಳನ್ನು ಹಾಡುವುದರ ಮೂಲಕ ಜಾನಪದ ಕಲೆಯನ್ನು ಉಳಿಸಿ ಬೆಳಸುತ್ತಿರುವರ ಶರಣಮ್ಮ ಸಜ್ಜನ ಅವರಿಗೆ ಜನೇವರಿ ೧೫ ರಂದು ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರದಲ್ಲಿ ಬಸವರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಾಡಿನ ವಿವಿಧ ಮಠಾಧೀಶರು ಶಿಕ್ಷಣ ತಜ್ಞರು ಸಾಹಿತಿಗಳು ಭಾಗವಹಿಸಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here