ಜನ ವಿರೋಧಿ ಕಾಯ್ದೆಗಳ ವಿರುದ್ಧ ಉಪವಾಸ ಧರಣಿ

0
182

ಕಲಬುರಗಿ: ಜನವಿರೋಧಿ ಕಾಯ್ದೆಗಳಾದ ರೈತ ಮಸೂದೆ, ವಿದ್ಯುತ್ ತಿದ್ದುಪಡಿ 2020 ಕಾಯ್ದೆ, ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಗೋವು ಹತ್ಯೆ ನಿಷೇಧ ಕಾಯ್ದೆ ಮತ್ತು ನೂತನ ಕಾರ್ಮಿಕ ಕಾನೂನುಗಳ ವಿರುದ್ಧ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳಲಾಗಿದೆ.

ನಗರದ ರಿಂಗ್ ರೋಡ್ ನ ತಾಜ್ ಫಂಕ್ಷನ್ ಹಾಲ್ ಹತ್ತಿರ ಗುಲಬರ್ಗಾ ಯೂತ್ ಫೋರಮ್ ಬ್ಯಾನರ್ ಅಡಿಯಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಯ್ದೆಗಳು ವಾಪಸ್ ಪಡೆಯಬೇಕೆಂದು ಒಂದು ದಿನದ ಸತ್ಯಾಗ್ರಹ ಹಮ್ಮಿಕೊಳಲಾಗಿದೆ.

Contact Your\'s Advertisement; 9902492681

ಸಿರಾಜ್ ಶಬ್ಡಿ, ರಿಯಾಜ್ ಖತೀಬ್, ಆಲಮದರ್ ಜೈದಿ, ಇಸ್ಮಾಯಿಲ್ ಬಾಬಾ, ನಜೀರ್ ಅಹ್ಮದ್, ಅಸ್ಲಂ ಹಜಾರೆ, ಅಜ್ಗರ್ ಹುಸೇನ್, ಶೇಖ್ ಮೋದಿನ್, ಜಾವೀದ್ ಅಹ್ಮದ್,ಅಜ್ಮದ್ ಸೆರಿಕರ್, ಸೈಯದ್ ವಸೀಮ್ ಅಕ್ರಮ್, ಹೈದರ್ ಇನಾಮ್ದಾರ್, ಫಿರೋಜ್ ಅಹ್ಮದ್ ಈ ಸತ್ಯಾಗ್ರಹದ ನೇತೃತ್ವವಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here