ಯಾದಗಿರಿ: ರಾಜಕೀಯ ವೈಷಮ್ಯದಿಂದ ಗಲಾಟೆ: ಹಲವರಿಗೆ ಗಾಯ ದೂರು ದಾಖಲು

0
67

ಸುರಪುರ: ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಎರಡು ಗುಂಪುಗಳ ಮದ್ಯೆ ಗಲಾಟೆ ನಡೆದು ಹಲವರು ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಹಂದ್ರಾಳ ಗ್ರಾಮದ ಪರಮಣ್ಣ ದೊಡ್ಮನಿ ಹಾಗು ಅಂಬ್ರಣ್ಣ ಎಂಬುವವರು ಪರಸ್ಪರ ಗಲಾಟೆ ನಡೆದು ಇಬ್ಬರಿಗೂ ಗಾಯಗಳಾಗಿವೆ.ಗಲಾಟೆಗೆ ಕಳೆದ ಕೆಲ ದಿನಗಳ ಹಿಂದೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪರಸ್ಪರ ವಿರೋಧಿ ಅಭ್ಯಾರ್ಥಿಗಳ ಪರವಾಗಿ ಕೆಲಸ ಮಾಡಿದ್ದರಿಂದ ಗಲಾಟೆ ನಡೆದಿದೆ ಎಂದು ಇಬ್ಬರು ದೂರಿನಲ್ಲಿ ಹೇಳಿಕೆ ನೀಡಿದ್ದು ಗಾಯಗೊಂಡ ಇಬ್ಬರಿಗು ಚಿಕಿತ್ಸೆ ನೀಡಲಾಗುತ್ತಿದ್ದು,ಹೆಚ್ಚಿನ ಗಾಯಕ್ಕೊಳಗಾಗಿರುವ ಪರಮಣ್ಣ ಎಂಬುವವರನ್ನು ಕಲಬುರ್ಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Contact Your\'s Advertisement; 9902492681

ಈ ಕುರಿತು ದೂರು ಮತ್ತು ಪ್ರತಿ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here