ರಾಜಕೀಯ ವೈಷಮ್ಯ ವ್ಯಕ್ತಿಯನ್ನು ಕಾದ ಎಣ್ಣೆಯಲ್ಲಿ ನೂಕಿದ ದುಷ್ಕರ್ಮಿಗಳು

0
51

ಸುರಪುರ: ತಾಲೂಕಿನ ಬೇವಿನಾಳ ಗ್ರಾಮದಲ್ಲಿ ರಾಜಕೀಯ ವೈಷಮ್ಯದಿಂದ ಗಲಾಟೆ ನಡೆದು ವ್ಯಕ್ತಿಯೊಬ್ಬನನ್ನು ಕಾಯ್ದ ಎಣ್ಣೆಯಲ್ಲಿ ನೂಕಿದ್ದರಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಬೇವಿನಾಳ ಗ್ರಾಮದ ಮರೆಪ್ಪ ಪೊಲೀಸ್ ಗೌಡರ್ ಎಂಬ ೪೫ ವರ್ಷದ ವ್ಯಕ್ತಿ ತನ್ನ ಮನೆಯಿಂದ ಕುರಿ ದೊಡ್ಡಿಯ ಕಡೆಗೆ ಹೊರಟ ಸಂದರ್ಭದಲ್ಲಿ ದಾರಿಯಲ್ಲಿ ಬೇರೊಬ್ಬರ ಮನೆಯಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯುತ್ತಿತ್ತು,ಈ ಮನೆಯ ಬಳಿಯಲ್ಲಿ ಅಡುಗೆ ಮಾಡಿ ನಂತರ ಉಳಿದ ಕಾಯ್ದ ಎಣ್ಣೆಯು ಕಡಾಯಿಯಲ್ಲಿ ಇರಿಸಲಾಗಿತ್ತು.

Contact Your\'s Advertisement; 9902492681

ಈ ಮನೆಯ ಮುಂದೆ ಹೊರಟಿದ್ದ ಮರೆಪ್ಪ ಪೊಲೀಸ್ ಗೌಡರ್‌ಗೆ ಕೆಲ ಪ್ರಭಾವಿ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮ ವಿರುಧ್ಧವೆ ಚುನಾವಣೆಯಲ್ಲಿ ಕೆಲಸ ಮಾಡುತ್ತಿ ಎಂದು ಗದರಿಸಿ ನಂತರ ಮರೆಪ್ಪನನ್ನು ತಳ್ಳಿದಾಗ ಮರೆಪ್ಪ ಕಾಯ್ದ ಎಣ್ಣೆಯ ಕಡಾಯಿಯಲ್ಲಿ ಬಿದ್ದ ಪರಿಣಾಮ ಮರೆಪ್ಪನು ಗಂಭೀರವಾಗಿ ಗಾಯಗೊಂಡಿದ್ದು ಇಡೀ ದೇಹವೆಲ್ಲ ಸುಟ್ಟು ಹೋಗಿ ಚರ್ಮ ಕಿತ್ತಿದೆ.

ನಂತರ ಈತನ ಪತ್ನಿ ಬೇರೆಯವರ ಸಹಾಯದೊಂದಿಗೆ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದಾರೆ.ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here