ದಲಿತ ವ್ಯಕ್ತಿಯ ಮೇಲೆ ಹಲ್ಲೆ: ಬಂಧನಕ್ಕೆ ಆಗ್ರಹಿಸಿ ಠಾಣೆ ಎದರು ಧರಣಿ

0
25

ಸುರಪುರ: ತಾಲೂಕಿನ ಹಂದ್ರಾಳ ಎಸ್.ಡಿ ಗ್ರಾಮದಲ್ಲಿ ಕಳೆದ ೧೧ನೇ ತಾರೀಖು ದಲಿತ ಸಮುದಾಯದ ಪರಮಣ್ಣ ಎಂಬುವವರ ಮೇಲೆ ಸವರ್ಣಿಯರು ಹಲ್ಲೆ ಮಾಡಿದ್ದಾರೆ,ದೂರನ್ನು ಕೂಡ ದಾಖಲಿಸಲಾಗಿದ್ದು ಇದುವರೆಗೂ ಆರೋಪಿಗಳನ್ನು ಪೊಲೀಸರು ಬಂಧಿಸದಿರುವುದು ಖಂಡನಿಯ ಎಂದು ದಲಿತ ಸೇನೆ ಜಿಲ್ಲಾಧ್ಯಕ್ಷ ಅಶೋಕ ಹೊಸ್ಮನಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿ ಮಾತನಾಡಿ,ಕೂಡಲೆ ಹಲ್ಲೆ ಮಾಡಿದವರು ಬಂಧಿಸಬೇಕು ಎಂದು ಆಗ್ರಹಿಸಿದರು.ಅಲ್ಲದೆ ಹಲ್ಲೆಗೊಳಗಾದ ಪರಮಣ್ಣನ ಮೇಲೆಯೆ ಪ್ರತಿ ದೂರು ದಾಖಲಿಸಲಾಗಿದೆ,ಆ ದೂರನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು.
ಧರಣಿಯಲ್ಲಿ ಸೇನೆಯ ತಾಲೂಕು ಅಧ್ಯಕ್ಷ ನಿಂಗಣ್ಣ ಗೋನಾಲ ಮಾತನಾಡಿ,ಘಟನೆ ನಡೆದು ೧೭ ದಿನವಾದರು ಆರೋಪಿಗಳನ್ನು ಬಂಧಿಸದೆ ಬಿಟ್ಟಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.ನಂತರ ಘಟನಾ ಸ್ಥಳಕ್ಕೆ ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಹಾಗು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಆಗಮಿಸಿ ಧರಣಿ ನಿರತರ ಮನವಿಯನ್ನು ಆಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರು ಮಾತನಾಡಿ,ಇನ್ನೂ ನಾಲ್ಕೈದು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು, ಅದರ ಬಗ್ಗೆ ಯಾವುದೇ ಅನುಮಾನ ಬೇಡ.ಆದ್ದರಿಂದ ತಾವು ಧರಣಿಯನ್ನು ಕೈಬಿಡುವಂತೆ ತಿಳಿಸಿದರು.

ಡಿವೈಎಸ್ಪಿಯವರ ಹೇಳಿಕೆಗೆ ಒಪ್ಪಿದ ಧರಣಿ ನಿರತರು ನಾಲ್ಕೈದು ದಿನಗಳಲ್ಲಿ ಎಲ್ಲಾ ೨೨ ಜನ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದಲ್ಲಿ ಮತ್ತೆ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.ನಂತರ ಕಲಬುರ್ಗಿ ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಹಣಮಂತ ಕಟ್ಟಿಮನಿ,ಟಿ.ರಂಗನಾಥ ಪ್ರಧಾನ ಕಾರ್ಯದರ್ಶಿ ಹುಲಗಪ್ಪ ದೇವತ್ಕಲ್ ಶಹಾಪುರ ತಾಲೂಕು ಅಧ್ಯಕ್ಷ ರಾಹುಲ್ ನಾಟೇಕಾರ್ ಮಾನಪ್ಪ ಝಂಡದಕೇರಾ ತಾಯಪ್ಪ ಕನ್ನೆಳ್ಳಿ ರವಿ ಬೊಮ್ಮನಹಳ್ಳಿ ಗುತ್ತಪ್ಪ ಬೊಮ್ಮನಹಳ್ಳಿ ಭೀಮಣ್ಣ ಹೆಬ್ಬಾಳ ನಾಗು ಗೋಗಿಕೇರಾ ಶಿವಣ್ಣ ನಾಗರಾಳ ಗೋಪಾಲ ರಾಚೂರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here