ನ್ಯಾಯಕ್ಕಾಗಿ ನಿಂತವರು

0
70
ನ್ಯಾಯಕ್ಕಾಗಿ ನಿಂತವರು

ಅನ್ನದಾತರ ಧೀರ ನಡಿಗೆಗೆ
ಹೆದ್ದಾರಿ ಹರ್ಷಗೊಂಡಿದೆ
ಭುಗಿಲೆದ್ದ ಹೋರಾಟದ ಹಾಡಿಗೆ
ಜೋಳದ ತೆನೆ ತಲೆದೂಗಿದೆ
ಘೋಷಣೆಗಳ ಆರ್ಭಟಕ್ಕೆ
ಶೋಷಕರ ಎದೆಗುಂಡಿಗೆ ನಡುಗಿದೆ

ದೆಹಲಿಯ ದರ್ಬಾರಿನ ಸುತ್ತ
ಜನಾಕ್ರೋಶದ ಹುತ್ತ
ಕರಾಳ ಕಾಯ್ದೆ ಬರೆದವರ ವಿರುದ್ಧ
ಕೆಂಡಕಾರಿತು ಕಿಚ್ಚ
ಭೂಮಿ ಕದಿಯಲು ಬಂದವರ ಬಂಧಿಸಲು
ತಲೆ ಎತ್ತಿತು ಬೆವರು ಬಾವುಟಗಳ ಕೋಟೆ

Contact Your\'s Advertisement; 9902492681

ಕ್ರಾಂತಿಯ ಕೂಗಿಗೆ ದಿಕ್ಕೆಟ್ಟ ಚಳಿ
ಬೆಚ್ಚಿಬಿದ್ದಿತು ನೋಡಾ
ಪೋಲೀಸರ ಕೃತಕ ಮಳಿ
ಎದುರಿಗಿದ್ದ ಯೋಧ ಹೆತ್ತ ಕರುಳಾದರೂ
ಗುಂಡುಗಳಿಗೆ ಎದೆಯೊಡ್ಡಿದ ರೈತರ ರೊಚ್ಚಿಗೆ
ಸರ್ಕಾರವೇ ಥರಗುಟ್ಟಿತು ಕೇಳಾ…

ನ್ಯಾಯಕ್ಕಾಗಿ ನಿಂತ್ತವರ
ನೆತ್ತರು ಕೇಳುವ ನರರಾಕ್ಷಸರೇ
ಇಲ್ಲೊಂದು ನೆನಪಿದೆ ಕೇಳಿ
ನೊಂದವರ ರಕ್ತದಿಂದಲೇ
ಈ ಕೋಟೆ ಕೆಂಪಾಗಿದೆ…
ನಮ್ಮವರ ಬೆವರಿನಿಂದಲೇ
ಆ ಬೆಟ್ಟ ಹಸಿರಾಗಿದೆ…
ಅನ್ನ ಕೊಡುವ ನೆಲ
ಉಸಿರು ಕೊಟ್ಟ ಗಾಳಿ
ವಿಷವಾಗಲು ಬಿಡಲಾರೆವು

ನೇಗಿಲ ಗೆರೆಯೊಳಗೆ
ನಮ್ಮ ಗೋರಿ ಕಟ್ಟಿಕೊಳ್ಳುವ ಮುನ್ನ
ನಿಮ್ಮ ಹೆಣಗಳ ಮೇಲೆ
ಇತಿಹಾಸ ಬರೆಯುತ್ತೇವೆ
ಹೊಲಗಳ ಮೇಲೆ ಹಕ್ಕಿಗಳು ಹಾರಿ
ಹೂಮಳೆ ಸುರಿಸುತ್ತವೆ…
ಹೋರಾಟದ ಕಹಳೆ ಮತ್ತೆ ಮತ್ತೆ ಊದುತ್ತವೆ….

– ಮಡಿವಾಳಪ್ಪ ಹೇರೂರ
ವಾಡಿ (ಜಂ).
ಕಲಬುರಗಿ ಜಿಲ್ಲೆ 9845238667

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here