ಜೈನ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಸತಿ ನಿಲಯ ಪ್ರಾರಂಭಕ್ಕೆ ಒತ್ತಾಯ

0
92

ಕಲಬುರಗಿ: ರಾಜ್ಯದ ಅಲ್ಪ ಸಂಖ್ಯಾತರ ಇಲಾಖೆ ವತಿಯಿಂದ ಜೈನ ಧರ್ಮಿಯರ ಬಹು ವರ್ಷಗಳ ಬೇಡಿಕೆಯಾದ ಜೈನ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಸತಿ ನಿಲಯಗಳನ್ನು ಪ್ರಾರಂಭಿಸುವಂತೆ ಕೋರಿ ರಾಜ್ಯದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮಂತ ಪಾಟೀಲ ರವರಿಗೆ ಮನವಿ ಸಲ್ಲಿಸಲಾಗಿದ್ದು, ಬರುವ ರಾಜ್ಯ ಸರ್ಕಾರದ ಆಯ-ವ್ಯಯದಲ್ಲಿ ಪ್ರತ್ಯೇಕ ವಸತಿ ನಿಲಯ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿ., ನಿರ್ದೇಶಕರಾದ ಸುರೆಶ ತಂಗಾ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ಈಗಾಗಲೇ ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ಬರುವ ವಸತಿ ನಿಲಯಗಳಲ್ಲಿ ಜೈನ ಧರ್ಮದ ಎದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಆದರೆ ಜೈನ ಧರ್ಮದ ಆಹಾರ-ವಿಹಾರ ಪದ್ಧತಿ ಬೇರೆಯಾಗಿರುವುದರಿಂದ ಮತ್ತು ಜೈನ ಧರ್ಮೀಯರು ಶುದ್ಧ ಶಾಖಾಹಾರಿಗಳಾಗಿರುವುದರಿಂದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಇರಲು ಎದ್ಯಾರ್ಥಿಗಳಿಗೆ ಹೊಂದಣಿಕೆ- ಯಾಗುತ್ತಿಲ್ಲ. ಇದರಿಂದ ವಸತಿ ನಿಲಯದ ಸೌಲಭ್ಯ ಪಡೆಯಲಾಗುತ್ತಿಲ್ಲ. ಹೀಗಾಗಿ ಜೈನ ಧರ್ಮದ ಸಾವಿರಾರು ಎದ್ಯಾರ್ಥಿಗಳು ಉನ್ನತ ಶಿಕ್ಷಣದಿ೦ದ ವಂಚಿತರಾಗುತ್ತಿದ್ದಾರೆ೦ದು ಸಚಿವರ ಗಮನಕ್ಕೆ ತಂದಾಗ ಸರ್ಕಾರದ ಮಟ್ಟದಲ್ಲಿ ಈಗಾಗಲೇ ಇದರ ಬಗ್ಗೆ ಚರ್ಚೆ ನಡೆದಿದ್ದು ಸಕಾರಾತ್ಮಕವಾಗಿ ಮುಖ್ಯಮಂತ್ರಿಗಳು ಸಹ ಸ್ಪಂದಿಸಿದ್ದು, ಬರುವ ಬಜೇಟ್‌ನಲ್ಲಿ ಜೈನ ಧರ್ಮೀಯರ ಪ್ರತ್ಯೇಕ ವಸತಿ ನಿಲಯಗಳನ್ನು ಪ್ರಾರಂಭಿಸುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜೈನ ಸಮಾಜದ ಯುವ ಮುಖಂಡರಾದ ರಾಜೇ೦ದ್ರ ಆರ್‌.ಕುಣಚಗಿ ಸೇರಿದಂತೆ ಅನೇಕರು ಉಪಸ್ಸಿತರಿದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here