ರೈಲಿನಿಂದ ಹಾರಿ ಕಾಲೇಜು ವಿದ್ಯಾರ್ಥಿನಿ ಸಾವು

0
62

ಕಲಬುರಗಿ: ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.

ಪಟ್ಟಣದ ಶಿವರಾಯ ಚೌಕಿ ಬಡಾವಣೆಯ ನಿವಾಸಿ ಕಿರಣಾ ಏಕನಾಥ (೧೭) ಮೃತಪಟ್ಟ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಕಾಲೇಜು ಮುಗಿಸಿಕೊಂಡು ಸೇಡಂದಿಂದ ಲಿಂಕ್ ಏಕ್ಸ್‌ಪ್ರೆಸ್ ರೈಲಿನ ಮೂಲಕ ವಾಡಿ ನಗರಕ್ಕೆ ಬರುತ್ತಿದ್ದ ಕಿರಣಾ, ರೈಲು ನಿಲುಗಡೆಯಾಗದೆ ವಾಡಿ ಹೊರ ವಲಯದಿಂದ ನಿಧಾನವಾಗಿ ಯಾದಗಿರಿ ಕಡೆ ಹೊರಟಿತ್ತು ಎನ್ನಲಾಗಿದ್ದು, ಗಾಭರಿಗೊಂಡ ಯುವತಿ, ಚಲಿಸುವ ರೈಲಿನಿಂದ ಇಳಿಯಲು ಮುಂದಾದಾಗ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

Contact Your\'s Advertisement; 9902492681

ರೈಲು ನಿಲ್ದಾಣ ಠಾಣೆಯ ಪಿಎಸ್‌ಐ ವೀರಭದ್ರಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here