ಪ್ರೊ.ಭಗವಾನಗೆ ಮಸಿ ಬಳಿದ ಪ್ರಕರಣ: ಮೀರಾ ವಕೀಲೆ ಸದಸ್ಯತ್ವ ರದ್ದು

0
293

ಬೆಂಗಳೂರು: ಹಿರಿಯ ಸಾಹಿತಿ ಪ್ರೊ.ಕೆ.ಎಸ್ ಭಗವಾನ ಅವರ ಮುಖಕ್ಕೆ ಮಸಿ ಬಳಿದ ಕೃತ್ಯವನ್ನು ಖಂಡಿಸಿ, ಬೆಂಗಳೂರು ವಕೀಲರ ಸಂಘ ವಕೀಲೆ ಮೀರಾ ರಾಘವೇಂದ್ರ ಅವರ ಸದಸ್ಯತ್ವವನ್ನು ರದ್ದು ಪಡೆಸಿ ಸಂಘದ ಅಧ್ಯಕ್ಷರಾದ ಎ.ಪಿ ರಂಗನಾಥ್, ಕಾರ್ಯದರ್ಶಿ ಎ.ಎನ್ ಗಂಗಾಧರಯ್ಯ ಹಾಗೂ ಖಜಾಂಚಿ ಶಿವಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ.

ಬೆ೦ಗಳೂರು ನಗರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಾಜರಾಗಲು ಬಂದಿದ್ದ ಹಿರಿಯ ಸಾಹಿತಿ.ಕೆ.ಎಸ್‌.ಭಗವಾನ್‌ ರವರ ಮುಖಕ್ಕೆ ವಕೀಲರಾದ ಮೀರಾ ರಾಘವೇ೦ದ್ರ ರವರು ಮಸಿ ಬಳಿದಿದ್ದನ್ನು ಬೆ೦ಗಳೂರು ವಕೀಲರ ಸಂಘವು ತೀವ್ರವಾಗಿ ಖಂಡಿಸುತ್ತದೆ. ವಕೀಲೆ ಮೀರಾ ರಾಘವೇಂದ್ರರವರು ಬೆ೦ಗಳೂರು ವಕೀಲರ ಸಂಘದ ಸದಸ್ಯರಾಗಿರುವುದಿಲ್ಲ ಎಂದು ತಿಳಿಸಿದೆ.

Contact Your\'s Advertisement; 9902492681

ಮೀರಾ ರಾಘವೇ೦ದ್ರರವರ ಈ ಕೃತ್ಯದಿ೦ದ ವಕೀಲ ವೃತ್ತಿಗೆ ಕಪ್ಪು ಚುಕ್ಕಿಯಾಗಿದೆ. ಬೆ೦ಗಳೂರು ವಕೀಲರ ಸ೦ಘವು ನ್ಯಾಯಾಂಗದ ಗೌರವವನ್ನು ಕಾಪಾಡುವಲ್ಲಿ ಮು೦ಚೂಣಿಯಲ್ಲಿರುತ್ತದೆ ಎಂದು ಸಂಘ ತಮ್ಮ ಆದೇಶ ಪತ್ರದಲ್ಲಿ ತಿಳಿಸಿದೆ.

ವಕೀಲೆ ಮೀರಾ ಅವರ ಸದಸ್ಯತ್ವ ರದ್ದತಿಗೆ ಒತ್ತಾಯಿಸಿ ದೇವರಾಜ್ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ಸೇರಿದಂತೆ ರಾಜ್ಯ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಒತ್ತಾಯಿಸಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here