ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಭೀಮಳ್ಳಿ, ಉಪಾಧ್ಯಕ್ಷ ಸ್ಥಾನಕ್ಕೆ ಡಾ.ಶರಣಬಸಪ್ಪ ಹರವಾಳ ಅವರು ನಾಮಪತ್ರ ಸಲ್ಲಿಸಿದರು.
ಉದಯಕುಮಾರ ಎಸ್. ಚಿಂಚೋಳಿ, ಅರುಣಕುಮಾರ ಎಂ.ವೈ.ಪಾಟೀಲ, ಡಾ.ನಾಗೇಂದ್ರ ಮಂಠಾಳೆ, ಸುರೇಶ ನಂದ್ಯಾಳ, ಅನೀಲ ಕಳಸ್ಕರ್, ಡಾ.ಮಹಾದೇವಪ್ಪ ವಿ.ರಾಂಪೂರೆ, ವಿನಯ ಎಸ್. ಪಾಟೀಲ ಕಮಲಾಪೂರ, ನಾಗಣ್ಣಾ ಎಸ್. ಘಂಟಿ, ದೊಡ್ಡಪ್ಪ ಎಸ್. ನಿಷ್ಠಿ, ಚಂದ್ರಶೇಖರ ಎಸ್. ಹಿರೇಮಠ, ಸಾಯಿನಾಥ ಎನ್.ಡಿ. ಪಾಟೀಲ, ಎನ್. ಗಿರಿಜಾಶಂಕರ್, ಡಾ.ರಜಿನೀಶ ವಾಲಿ ಇದ್ದರು.